
- ವಿರೋಧದ ಬೆನ್ನಲ್ಲೇ 46 ಜಾತಿಗಳಿಂದ 33 ಜಾತಿಗಳನ್ನು ತೆಗೆದ ಸರ್ಕಾರ
ಬೆಂಗಳೂರು: ಸಮುದಾಯಗಳ ತೀವ್ರ ಒತ್ತಡಕ್ಕೆ ಮಣಿದ ಸರ್ಕಾರ ಜಾತಿಗಣತಿ ನಮೂನೆಯಿಂದ ಹಿಂದೂ ಕ್ರೈಸ್ತಗೆ ಕೊಕ್ ನೀಡಿದೆ. ಕ್ರೈಸ್ತ ಜೊತೆ ನಾನಾ ಹಿಂದೂ ಜಾತಿ ಉಲ್ಲೇಖಕ್ಕೆ ಬ್ರೇಕ್ ಹಾಕಿದೆ.
ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಹಿಂದುಳಿದ ಆಯೋಗ ಜಾತಿ ಗಣತಿಯಿಂದ 33 ಜಾತಿಗಳನ್ನು ಪಟ್ಟಿಯಿಂದ ತೆಗೆದಿದೆ. ಸೋಮವಾರದಿಂದ ಸಮೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಮತ್ತು ಆಯುಕ್ತ ದಯಾನಂದ ಭಾಗಿಯಾಗಿ ಹಲವು ವಿಚಾರಗಳನ್ನು ತಿಳಿಸಿದರು.
ಹಿಂದೆ ಬಂದಿರುವ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ಎನ್ನುವುದು ಇತ್ತು. ಈ ಕಾರಣಕ್ಕೆ ಜಾತಿ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಮಾಧ್ಯಮಗಳಲ್ಲಿ ಈ ವಿಚಾರ ಬಂದ ಕಾರಣ ಚರ್ಚೆಗೆ ಕಾರಣವಾಗಿತ್ತು ಎಂದು ಮಧುಸೂದನ್ ನಾಯಕ್ ತಿಳಿಸಿದರು.
ಅಧಿಕಾರಿಗಳು ಹೇಳಿದ್ದೇನು?
ಯಾರು ಯಾವ ಜಾತಿ ಬೇಕಾದರೂ ಬರೆಸಬಹುದು. 1561 ಜಾತಿ ಬಿಟ್ಟು ಬೇರೆ ಯಾವುದೇ ಜಾತಿ ಇದ್ದರು ಮಾಹಿತಿ ಕೊಡಬಹುದು. ನಾನು ಜಾತಿ ಹೇಳುವುದಿಲ್ಲ ಎಂದರೂ ಅದಕ್ಕೂ ಅವಕಾಶವಿದೆ. ಇತರೇ ಅಂತಲೂ ಕಾಲಂ ಕೊಡಲಾಗಿದೆ. ಗೊಂದಲಲವಾಗಿರುವ ಜಾತಿಗಳ ಹೆಸರನ್ನು ತೆಗೆಯಲಾಗಿದೆ.
ಕ್ರಿಶ್ಚಿಯನ್ ಒಕ್ಕಲಿಗ, ಲಿಂಗಾಯತ ಅಂತ ಜನರು ಇದ್ದರೆ ಬರೆಸಬಹುದು. ಡ್ರಾಪ್ ಔಟ್ ನಿಂದ ಮಾತ್ರ ತೆಗೆಯಲಾಗಿದೆ. ಆದರೆ ಆ ಜಾತಿಗಳು ಇರಲಿವೆ. ಬರೆಯಲು ಇಚ್ಛೆ ಇರುವವರು ಬರೆಸಬಹುದು. ಇದನ್ನು ಪಬ್ಲಿಕ್ ಮಾಡೋ ಅವಶ್ಯಕತೆ ಇಲ್ಲ.
ಪ್ರಾಟೆಸ್ಟೆಂಟ್ ಕ್ರೈಸ್ತ, ಕ್ರೈಸ್ತಪ್ರಾಟೆಸ್ಟೆಂಟ್, ಸಿರಿಯನ್ ಕ್ರೈಸ್ತ, ಎಸ್ಸಿ ಮತಾಂತರ ಕ್ರೈಸ್ತವನ್ನು ಉಳಿಸಿದ್ದೇವೆ. ಇದನ್ನ ಹೊರತುಪಡಿಸಿ 33 ಜಾತಿ ತೆಗೆದಿದ್ದೇವೆ. ಬ್ರಾಹ್ಮಣ ಮುಸ್ಲಿಂ, ಜೈನ್, ಇದಕ್ಕೆ ವಿರೋಧ ಬರಲಿಲ್ಲ. ಅದಕ್ಕೆ ಅದನ್ನ ಮುಂದುವರಿಸಿದ್ದೇವೆ. ಯಾರು ಯಾವ ಜಾತಿ ಬೇಕಾದ್ರು ಬರೆಸಬಹುದು ಎಂದು ತಿಳಿಸಿದರು.
ಸಮೀಕ್ಷೆಯಾದ ಮೇಲೆ ತಜ್ಞರು ಎಲ್ಲಾ ಜಾತಿ ಮಾಹಿತಿ ಪಡೆದು ಯಾವ ಯಾವ ಕೆಟಗೆರಿಗೆ ಬರುತ್ತಾರೆ ಎಂದು ಪಟ್ಟಿ ಮಾಡುತ್ತಾರೆ. ಮತಾಂತರ ಆಗಿದ್ದರೆ ಮತಾಂತರ ಆದ ಧರ್ಮದಲ್ಲಿ ಅವರು ಇರುತ್ತಾರೆ. ಮತಾಂತರ ಆದವರು ಮೂಲ ಜಾತಿಗೆ ಬರುವುದಿಲ್ಲ
ಯಾವ ಜಾತಿ, ಧರ್ಮದ ಅಂಕಿಅಂಶಗಳನ್ನು ಜಾಸ್ತಿ ಮಾಡುವುದಿಲ್ಲ. ಮತಾಂತರ ಆದವರಿಗೆ ಮತಾಂತರವಾದ ಧರ್ಮವೇ ಇರಲಿದೆ. ಮೂಲ ಜಾತಿ ಅವರಿಗೆ ಅನ್ವಯ ಆಗುವಿದಿಲ್ಲ. ಆಯೋಗ ಸ್ವತಂತ್ರ ಸಂಸ್ಥೆಯಾಗಿದ್ದು ನಮಗೂ ಸರ್ಕಾರಕ್ಕೂ ಸಂಬಂಧವಿಲ್ಲ. ನಿಯಮದ ಪ್ರಕಾರ ನಾವು ಸಮೀಕ್ಷೆ ಮಾಡುತ್ತೇವೆ.