Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಪ್ಯಾಲೆಸ್ತೀನ್ ಪರ ವಿಶ್ವ ಸಂಸ್ಥೆ ನಿರ್ಣಯ: ಭಾರತ ಸೇರಿದಂತೆ 142 ರಾಷ್ಟ್ರಗಳ ಬೆಂಬಲ

    ಪ್ಯಾಲೆಸ್ತೀನ್ ಪರ ವಿಶ್ವ ಸಂಸ್ಥೆ ನಿರ್ಣಯ: ಭಾರತ ಸೇರಿದಂತೆ 142 ರಾಷ್ಟ್ರಗಳ ಬೆಂಬಲ

    ಹಾಸನ ಟ್ರಕ್ ಹರಿದು ದುರಂತ: ಸಾವಿನ ಸಂಖ್ಯೆ ಹತ್ತಕ್ಕೆ ಏರಿಕೆ, ಹಿಮ್ಸ್ ಆಸ್ಪತ್ರೆಯಲ್ಲಿ ಚಂದನ್ ಸಾವು

    ಮಂಗಳೂರು: ನಕಲಿ ಆಧಾರ್ ಕಾರ್ಡ್ ಹಾಗೂ ಪಹಣಿ ಪತ್ರಗಳನ್ನು ತಯಾರಿಸಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಜಾಮೀನು ಕೊಡಿಸುತ್ತಿದ್ದ ಗ್ಯಾಂಗ್ ಬಂಧನ

    ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಬ್ಯುರೋಕ್ರಸಿಯ ಅಟ್ಟಹಾಸ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ’:ಬಂಟ್ವಾಳ SDPI ನಾಯಕರ ಸಭೆಯಲ್ಲಿ ರಿಯಾಝ್ ಕಡಂಬು

    ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಬ್ಯುರೋಕ್ರಸಿಯ ಅಟ್ಟಹಾಸ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ’:ಬಂಟ್ವಾಳ SDPI ನಾಯಕರ ಸಭೆಯಲ್ಲಿ ರಿಯಾಝ್ ಕಡಂಬು

    ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಸಾವಿನ ಸಂಖ್ಯೆ 9ಕ್ಕೆ ಏರಿಕೆ

    ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್   ಹಾಕಿದ ಮಹೇಶ್ ವಿಕ್ರಂ ಹೆಗ್ಡೆ; ಕೇಸ್ ಹಾಕಿ ಜೈಲಿಗಟ್ಟಿದ ಸರ್ಕಾರ!

    ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಮಹೇಶ್ ವಿಕ್ರಂ ಹೆಗ್ಡೆ; ಕೇಸ್ ಹಾಕಿ ಜೈಲಿಗಟ್ಟಿದ ಸರ್ಕಾರ!

    ಹಾಸನ| ಗಣಪತಿ ಮೆರವಣಿಗೆ ವೇಳೆ ಭೀಕರ ದುರಂತ – ಟ್ರಕ್‌ ಹರಿದು 6 ಮಂದಿ ಸ್ಥಳದಲ್ಲೇ ಸಾವು

    ಹಾಸನ| ಗಣಪತಿ ಮೆರವಣಿಗೆ ವೇಳೆ ಭೀಕರ ದುರಂತ – ಟ್ರಕ್‌ ಹರಿದು 6 ಮಂದಿ ಸ್ಥಳದಲ್ಲೇ ಸಾವು

    ಉಡುಪಿ :ಪ್ರೇಯಸಿಯನ್ನು ಕೊಂದು ಪರಾರಿಯಾಗಿದ್ದ ಪ್ರಿಯಕರ ಶವವಾಗಿ ಪತ್ತೆ, ಹುಟ್ಟುಹಬ್ಬದಂದೇ ಯುವತಿ ದುರಂತ ಅಂತ್ಯ

    4 ಶಂಕಾಸ್ಪದ ಸಾವುಗಳ ತನಿಖೆಗೆ ತಿಮರೋಡಿ ದೂರು, ವಿಠಲಗೌಡ ಆರೋಪವನ್ನು ಎಸ್‌ಐಟಿ ಪರಿಶೀಲಿಸಿ ಕ್ರಮ: ಪರಮೇಶ್ವರ್

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಪ್ಯಾಲೆಸ್ತೀನ್ ಪರ ವಿಶ್ವ ಸಂಸ್ಥೆ ನಿರ್ಣಯ: ಭಾರತ ಸೇರಿದಂತೆ 142 ರಾಷ್ಟ್ರಗಳ ಬೆಂಬಲ

    ಪ್ಯಾಲೆಸ್ತೀನ್ ಪರ ವಿಶ್ವ ಸಂಸ್ಥೆ ನಿರ್ಣಯ: ಭಾರತ ಸೇರಿದಂತೆ 142 ರಾಷ್ಟ್ರಗಳ ಬೆಂಬಲ

    ಹಾಸನ ಟ್ರಕ್ ಹರಿದು ದುರಂತ: ಸಾವಿನ ಸಂಖ್ಯೆ ಹತ್ತಕ್ಕೆ ಏರಿಕೆ, ಹಿಮ್ಸ್ ಆಸ್ಪತ್ರೆಯಲ್ಲಿ ಚಂದನ್ ಸಾವು

    ಮಂಗಳೂರು: ನಕಲಿ ಆಧಾರ್ ಕಾರ್ಡ್ ಹಾಗೂ ಪಹಣಿ ಪತ್ರಗಳನ್ನು ತಯಾರಿಸಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಜಾಮೀನು ಕೊಡಿಸುತ್ತಿದ್ದ ಗ್ಯಾಂಗ್ ಬಂಧನ

    ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಬ್ಯುರೋಕ್ರಸಿಯ ಅಟ್ಟಹಾಸ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ’:ಬಂಟ್ವಾಳ SDPI ನಾಯಕರ ಸಭೆಯಲ್ಲಿ ರಿಯಾಝ್ ಕಡಂಬು

    ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಬ್ಯುರೋಕ್ರಸಿಯ ಅಟ್ಟಹಾಸ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ’:ಬಂಟ್ವಾಳ SDPI ನಾಯಕರ ಸಭೆಯಲ್ಲಿ ರಿಯಾಝ್ ಕಡಂಬು

    ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಸಾವಿನ ಸಂಖ್ಯೆ 9ಕ್ಕೆ ಏರಿಕೆ

    ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್   ಹಾಕಿದ ಮಹೇಶ್ ವಿಕ್ರಂ ಹೆಗ್ಡೆ; ಕೇಸ್ ಹಾಕಿ ಜೈಲಿಗಟ್ಟಿದ ಸರ್ಕಾರ!

    ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಮಹೇಶ್ ವಿಕ್ರಂ ಹೆಗ್ಡೆ; ಕೇಸ್ ಹಾಕಿ ಜೈಲಿಗಟ್ಟಿದ ಸರ್ಕಾರ!

    ಹಾಸನ| ಗಣಪತಿ ಮೆರವಣಿಗೆ ವೇಳೆ ಭೀಕರ ದುರಂತ – ಟ್ರಕ್‌ ಹರಿದು 6 ಮಂದಿ ಸ್ಥಳದಲ್ಲೇ ಸಾವು

    ಹಾಸನ| ಗಣಪತಿ ಮೆರವಣಿಗೆ ವೇಳೆ ಭೀಕರ ದುರಂತ – ಟ್ರಕ್‌ ಹರಿದು 6 ಮಂದಿ ಸ್ಥಳದಲ್ಲೇ ಸಾವು

    ಉಡುಪಿ :ಪ್ರೇಯಸಿಯನ್ನು ಕೊಂದು ಪರಾರಿಯಾಗಿದ್ದ ಪ್ರಿಯಕರ ಶವವಾಗಿ ಪತ್ತೆ, ಹುಟ್ಟುಹಬ್ಬದಂದೇ ಯುವತಿ ದುರಂತ ಅಂತ್ಯ

    4 ಶಂಕಾಸ್ಪದ ಸಾವುಗಳ ತನಿಖೆಗೆ ತಿಮರೋಡಿ ದೂರು, ವಿಠಲಗೌಡ ಆರೋಪವನ್ನು ಎಸ್‌ಐಟಿ ಪರಿಶೀಲಿಸಿ ಕ್ರಮ: ಪರಮೇಶ್ವರ್

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
No Result
View All Result
Home ಸುದ್ದಿ ರಾಜ್ಯ

ಅಭಿವೃದ್ಧಿ ಕಾಣದ ಬಜಪೆ ಪಟ್ಟಣ ಪಂಚಾಯತ್, ವರ್ಗಾವಣೆಯ ಹೆಸರಲ್ಲಿ ಪಂಚಾಯತ್ ಕೆಲಸ ಕಾರ್ಯ ಅಸ್ಥವ್ಯಸ್ಥ-ಎಸ್ಡಿಪಿಐ ಆಕ್ರೋಶ

editor tv by editor tv
September 12, 2025
in ರಾಜ್ಯ
0
1.9k
VIEWS
Share on FacebookShare on TwitterShare on Whatsapp

ವರ್ಗಾವಣೆಯ ಹೆಸರಲ್ಲಿ ಪಂಚಾಯತ್ ಕೆಲಸ ಕಾರ್ಯ ಅಸ್ಥವ್ಯಸ್ಥ-ಎಸ್ಡಿಪಿಐ ಆಕ್ರೋಶ

ಕಾಂಗ್ರೆಸ್ ಮುಖಂಡನ ದುರ್ವರ್ತನೆ,
ಕಡಿವಾಣ ಹಾಕಲು ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ತಾಕೀತು

ಬಜಪೆ ಗ್ರಾಮ ಪಂಚಾಯತ್ ಮೇಲ್ದರ್ಜೆಗೇರಿ ಪಟ್ಟಣಪಂಚಾಯತ್ ಆಗಿ ರೂಪೀಕರಣಗೊಂಡು ಮನೆ ತೆರಿಗೆಯಂಥಹ ಶುಲ್ಕಗಳು ನಾಲ್ಕು ಪಟ್ಟು ಜಾಸ್ತಿಯಾಗಿ ನಾಲ್ಕು ವರ್ಷ ಸಂದರೂ ಇಡೀ ಪಂಚಾಯತ್ ವ್ಯಾಪ್ತಿ ಅಸ್ತವ್ಯಸ್ತಗೊಂಡ ರಸ್ತೆಗಳು,ದುರಸ್ತಿ ಕಾಣದ ಚರಂಡಿಗಳು ,ರಸ್ತೆ ಇಕ್ಕೆಲಗಳಲ್ಲಿ ಗಿಡಮರಗಳ ಬೆಳೆಯುವಿಕೆ,ನಾಯಿಗಳ ರಂಪಾಟ, ನೂತನ ಯೋಜನೆಗಳಿಲ್ಲದೆ ಅಭಿವೃದ್ಧಿ ಕಾಣದ ಪಂಚಾಯತ್ ಆಗಿ ಮುಂದುವರಿಯುತಿದೆ.ಎಂದು ಎಸ್ ಡಿ ಪಿ ಐ ಬಜಪೆ ಪಟ್ಟಣಪಂಚಾಯತ್ ಸಮಿತಿ ಆರೋಪಿಸಿದೆ.

ಕಳೆದ ವರ್ಷ ಇಲ್ಲಿನ ರಸ್ತೆಗೆ ಕಾಂಕ್ರೀಟೀಕರಣವಾಗಿದ್ದರೂ ರಸ್ತೆ ಮಧ್ಯೆ ಇರುವ ಇಂಟರ್ ಲೋಕ್ ಗಳ ದುರವಸ್ಥೆಯಿಂದ ದ್ವಿಚಕ್ರ ವಾಹನ ನಡೆಸುವವರ ಅಪಘಾತ ವಿಪರೀತವಾಗಿದೆ, ಅಗಲವಿರುವ ಕಾಂಕ್ರೀಟ್ ರಸ್ತೆ ಬ್ಲೂಗೇಟ್-ಭೂಮಿ ಪ್ಲಾಟ್ ಎದುರುಗಡೆ ಬರುವಾಗ ಏಕರಸ್ತೆಯಾಗಿ ಅಪಘಾತ ವಿಪರೀತವಾಗಿದೆ.ಬಜಪೆ ಪೋಲೀಸ್ ಠಾಣೆ ರಸ್ತೆ, ಹಳೆ ವಿಮಾನನಿಲ್ದಾಣ ರಸ್ತೆ,ಚರ್ಚ್ ಸಮೀಪದ ರಸ್ತೆ, ಸ್ರಷ್ಟಿ ಹೋಟೆಲ್ ಸಮೀಪದ ರಸ್ತೆ,ಕಿನ್ನಿಪದವು ದ್ವಾರದ ರಸ್ತೆಗಳು ಹದಗೆಟ್ಟಿದೆ.ಬಜಪೆ ಜಯರಾಜ್ ಬಾರ್ ಹತ್ತಿರ ಇಕ್ಕೆಲಗಳಲ್ಲಿ ವಾಹನಗಳ ನಿಲ್ಲುಸುವಿಕೆ,ಬಜಪೆ ಪೇಟೆಯಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು,ನಾಯಿಗಳ ಹಾವಳಿಯಿಂದ ಶಾಲೆಗೆ ಹೋಗುವ ಮಕ್ಕಳು ಮತ್ತು ಸಾರ್ವಜನಿಕರು ತೊಂದರೆಗೆ ಒಳಗಾಗುತಿದ್ದಾರೆ ಹೀಗೆಯೇ ಮುಂತಾದ ಹತ್ತು ಹಲವಾರು ಸಮಸ್ಯೆಗಳಿದ್ದರೂ ಅದರಲ್ಲೂ ರಾಜಕೀಯ ನಡೆಸಿ ಅಭಿವೃದ್ಧಿ ನಡೆಸದಂತೆ ಮಾಡುವುದರಲ್ಲಿ ಈ ಕಾಂಗ್ರೆಸ್ ಮುಖಂಡ ಮಾಜಿ ಅಧ್ಯಕ್ಷ ನ ಕಿತಾಪತಿ ಮತ್ತು ಕಿರಿಕಿರಿ ದಿನೇದಿನೇ ಜಾಸ್ತಿಯಾಗುವುದನ್ನು ಎಸ್ಡಿಪಿಐ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸುತ್ತದೆ ಹಾಗೂ ಎಸ್ಡಿಪಿಐ ಬಜಪೆ ಪಟ್ಟಣಪಂಚಾಯತ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ

ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ನಿಶ್ಚಿಂತವಾಗಿ ಕರ್ತವ್ಯ ನಿರ್ವಹಿಸಲು ತೊಡಕಾಗಿರುವುದು ಇಲ್ಲಿನ ಕಾಂಗ್ರೆಸ್ ಮುಖಂಡ-ಮಾಜಿ ಅಧ್ಯಕ್ಷನ ಬ್ಲೇಕ್ಮೇಲ್ ಗಳು. ಹೆದರಿಸುವಂತದು,ವರ್ಗಾವಣೆ ಹೆಸರಲ್ಲಿ ಬೆದರಿಸುವಂತದು ಇದು ಇಲ್ಲಿ ಸರಾಗವಾಗಿದೆ.ನಮ್ಮ ಸರ್ಕಾರ ಇದೆ ನಿಮ್ಮನ್ನು ಏನು ಬೇಕಾದರೂ ನನಗೆ ಮಾಡಬಹುದು,ನಾನು ಹೇಳಿದ ಕೆಲಸ ಮಾಡಬೇಕು,ನನ್ನ ಸರಕಾರ ಇದೆ,ಉಸ್ತುವಾರಿ ಸಚಿವರು ನನ್ನ ಮಾತು ಮೀರುವುದಿಲ್ಲ,ಸ್ಪೀಕರ್ ರವರಿಗೆ ನನ್ನ ಮಾತೇ ಕೊನೆ,ಮಿಥುನ್ ನಾನು ಹೇಳಿದ್ದನ್ನು ತಪ್ಪುವುದಿಲ್ಲ ಎಂದೆಲ್ಲಾ ಹೆದರಿಸಿ ತೊಂದರೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಎಂದು ಆರೋಪಿಸಿದೆ
ತಾನು ಹೇಳಿದಾಗೆ ಕೇಳದ ಮೂರು ಸಿಬ್ಬಂದಿಗಳನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದ್ದು ಈ ರೀತಿಯ ಕಾಂಗ್ರೆಸ್ ಮುಖಂಡ-ಮಾಜಿ ಅಧ್ಯಕ್ಷನ ವರ್ತನೆಯನ್ನು ಎಸ್ಡಿಪಿಐ ಬಜಪೆ ಪಟ್ಟಣಪಂಚಾಯತ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ.

ಇದಲ್ಲದೆ ಪಂಚಾಯತ್ ಗೆ ಒಳಪಟ್ಟ ಮಾರ್ಕೆಟ್ ಕಟ್ಟಡದ ಎರಡು ಅಂಗಡಿಗಳು ಮತ್ತು ವಾರದ ಸಂತೆಗಳ ಟೆಂಡರನ್ನು ಹಲವಾರು ವರ್ಷಗಳಿಂದ ತನ್ನ ಸ್ವಾಧೀನ ದಲ್ಲಿಟ್ಟು ಅದರ ವಸೂಲಿ ಐದು ಲಕ್ಷ ಹಣವನ್ನು ಪಂಚಾಯತ್ ಗೆ ನೀಡದೆ ಇರುವ ಆರೋಪ ಕೂಡ ಇದ್ದು,ಇತ್ತೀಚೆಗೆ ಜನರ ಒತ್ತಾಯಕ್ಕೆ ಮಣಿದ ಇಲ್ಲಿನ ಮೇಲಾಧಿಕಾರಿ ಟೆಂಡರ್ ಕರೆದು ಬೇರೆಯವರಿಗೆ ನೀಡಲಾಗಿದೆ.ಈ ನೆಲೆಯಲ್ಲಿ ಈ ಅಧಿಕಾರಿಗೆ ಕಿರುಕುಳ ನೀಡುತಿರುವುದು ಮನೆಮಾತಾಗಿದೆ.ಅದಲ್ಲದೆ ಹೊಸದಾಗಿ ಟೆಂಡರ್ ಪಡೆದಿರುವ ಗುತ್ತಿಗೆದಾರನಿಗೆ ಕಿರುಕುಳ ನೀಡುತಿರುವ ಬಗ್ಗೆ ಪೋಲೀಸ್ ಇಲಾಖೆಗೆ ದೂರು ನೀಡಲಾಗಿದೆ.

ಬಜ್ಪೆ ಪಟ್ಟಣ ಪಂಚಾಯತ್ ‌ಅಧಿಕಾರಿಗಳು-ಸಿಬ್ಬಂದಿಗಳು ಯಾವುದೇ ರಾಜಕೀಯ ಪಕ್ಷಗಳ ನಾಯಕರ ಒತ್ತಡಕ್ಕೆ ಹೆದರಿ-ಬೆದರಿಕೆಗೆ ಮಣಿಯದೆ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಬೇಕು ಮತ್ತು ಪಂಚಾಯತ್ ವ್ಯಾಪ್ತಿಯ ಎಲ್ಲಾ ಸಮಸ್ಯೆಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಮನಕೊಟ್ಟು ಕೆಲಸ ನಿರ್ವಹಿಸಬೇಕು,ಕಾಂಗ್ರೆಸ್ ಸ್ಥಳೀಯ ಮುಖಂಡನ ದುರ್ವರ್ತನೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಕಡಿವಾಣ ಹಾಕಬೇಕು.
ಇಲ್ಲದಿದ್ದಲ್ಲಿ ತೀವ್ರ ಹೋರಾಟ ನಡೆಸಬೇಕಾದೀತು ಎಂದು ಎಸ್ಡಿಪಿಐ ಬಜ್ಪೆ ಪಟ್ಟಣಪಂಚಾಯತ್ ಸಮಿತಿ ಅಧ್ಯಕ್ಷ ಹಸೈನಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Previous Post

ಮತ್ತೆ ಬರುತ್ತಿದೆ ಜಾತಿ ಗಣತಿ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

Next Post

4 ಶಂಕಾಸ್ಪದ ಸಾವುಗಳ ತನಿಖೆಗೆ ತಿಮರೋಡಿ ದೂರು, ವಿಠಲಗೌಡ ಆರೋಪವನ್ನು ಎಸ್‌ಐಟಿ ಪರಿಶೀಲಿಸಿ ಕ್ರಮ: ಪರಮೇಶ್ವರ್

Next Post

4 ಶಂಕಾಸ್ಪದ ಸಾವುಗಳ ತನಿಖೆಗೆ ತಿಮರೋಡಿ ದೂರು, ವಿಠಲಗೌಡ ಆರೋಪವನ್ನು ಎಸ್‌ಐಟಿ ಪರಿಶೀಲಿಸಿ ಕ್ರಮ: ಪರಮೇಶ್ವರ್

Leave a Reply Cancel reply

Your email address will not be published. Required fields are marked *

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.