Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ತಲೆಮರೆಸಿಕೊಂಡಿದ್ದ ಸ್ವಾಮಿ ಚೈತನ್ಯಾನಂದ ಅರೆಸ್ಟ್‌

    ತಮಿಳು ನಟ ವಿಜಯ್‌ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ – ಮಕ್ಕಳು ಸೇರಿ 33 ಮಂದಿ ಸಾವು

    ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭಿಣಿಯಾಗಿ ಮಗು ಜನಿಸಿದ್ದ ಪ್ರಕರಣ: ಕೊನೆಗೂ ಬಯಲಾಯ್ತು ರಹಸ್ಯ

    ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭಿಣಿಯಾಗಿ ಮಗು ಜನಿಸಿದ್ದ ಪ್ರಕರಣ: ಕೊನೆಗೂ ಬಯಲಾಯ್ತು ರಹಸ್ಯ

    ಉಡುಪಿ | A.K.M.S ಬಸ್ ಮಾಲಕ ಸೈಪುದ್ದೀನ್ ಬರ್ಬರ ಹತ್ಯೆ

    ಉಡುಪಿ | A.K.M.S ಬಸ್ ಮಾಲಕ ಸೈಪುದ್ದೀನ್ ಬರ್ಬರ ಹತ್ಯೆ

    ನಾನು ಬಸವ ಧರ್ಮದ ಪರ ಇರೋನು, ಧರ್ಮದ ಕಾಲಮ್‌ನಲ್ಲಿ ಲಿಂಗಾಯತ ಧರ್ಮ ಅಂತನೇ ಬರೆಸ್ತೀನಿ: ಎಂ.ಬಿ ಪಾಟೀಲ್‌

    ದೀಪಾವಳಿ ಸಮಯದಲ್ಲಿ ಮಾಲಿನ್ಯ ಭೀತಿ – ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ

    ಆಮೆಗತಿಯಲ್ಲಿ ಸಾಗಿದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ – ಚುರುಕು ಮುಟ್ಟಿಸಲು ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ

    Mangaluru: ದುಬೈಗೆ ತೆರಳಬೇಕಿದ್ದ ಏರ್​​ ಇಂಡಿಯಾ ವಿಮಾನದ ಹಾರಾಟ ರದ್ದು; ಅಷ್ಟಕ್ಕೂ ಆಗಿದ್ದೇನು?

    Mangaluru: ದುಬೈಗೆ ತೆರಳಬೇಕಿದ್ದ ಏರ್​​ ಇಂಡಿಯಾ ವಿಮಾನದ ಹಾರಾಟ ರದ್ದು; ಅಷ್ಟಕ್ಕೂ ಆಗಿದ್ದೇನು?

    ದತ್ತಾಂಶವನ್ನು ಸಂಪೂರ್ಣವಾಗಿ ರಕ್ಷಿಸಿ – ಜಾತಿ ಸಮೀಕ್ಷೆಗೆ ಷರತ್ತು, ಸರ್ಕಾರಕ್ಕೆ ಬಿಗ್‌ ರಿಲೀಫ್‌

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ತಲೆಮರೆಸಿಕೊಂಡಿದ್ದ ಸ್ವಾಮಿ ಚೈತನ್ಯಾನಂದ ಅರೆಸ್ಟ್‌

    ತಮಿಳು ನಟ ವಿಜಯ್‌ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ – ಮಕ್ಕಳು ಸೇರಿ 33 ಮಂದಿ ಸಾವು

    ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭಿಣಿಯಾಗಿ ಮಗು ಜನಿಸಿದ್ದ ಪ್ರಕರಣ: ಕೊನೆಗೂ ಬಯಲಾಯ್ತು ರಹಸ್ಯ

    ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭಿಣಿಯಾಗಿ ಮಗು ಜನಿಸಿದ್ದ ಪ್ರಕರಣ: ಕೊನೆಗೂ ಬಯಲಾಯ್ತು ರಹಸ್ಯ

    ಉಡುಪಿ | A.K.M.S ಬಸ್ ಮಾಲಕ ಸೈಪುದ್ದೀನ್ ಬರ್ಬರ ಹತ್ಯೆ

    ಉಡುಪಿ | A.K.M.S ಬಸ್ ಮಾಲಕ ಸೈಪುದ್ದೀನ್ ಬರ್ಬರ ಹತ್ಯೆ

    ನಾನು ಬಸವ ಧರ್ಮದ ಪರ ಇರೋನು, ಧರ್ಮದ ಕಾಲಮ್‌ನಲ್ಲಿ ಲಿಂಗಾಯತ ಧರ್ಮ ಅಂತನೇ ಬರೆಸ್ತೀನಿ: ಎಂ.ಬಿ ಪಾಟೀಲ್‌

    ದೀಪಾವಳಿ ಸಮಯದಲ್ಲಿ ಮಾಲಿನ್ಯ ಭೀತಿ – ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ

    ಆಮೆಗತಿಯಲ್ಲಿ ಸಾಗಿದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ – ಚುರುಕು ಮುಟ್ಟಿಸಲು ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ

    Mangaluru: ದುಬೈಗೆ ತೆರಳಬೇಕಿದ್ದ ಏರ್​​ ಇಂಡಿಯಾ ವಿಮಾನದ ಹಾರಾಟ ರದ್ದು; ಅಷ್ಟಕ್ಕೂ ಆಗಿದ್ದೇನು?

    Mangaluru: ದುಬೈಗೆ ತೆರಳಬೇಕಿದ್ದ ಏರ್​​ ಇಂಡಿಯಾ ವಿಮಾನದ ಹಾರಾಟ ರದ್ದು; ಅಷ್ಟಕ್ಕೂ ಆಗಿದ್ದೇನು?

    ದತ್ತಾಂಶವನ್ನು ಸಂಪೂರ್ಣವಾಗಿ ರಕ್ಷಿಸಿ – ಜಾತಿ ಸಮೀಕ್ಷೆಗೆ ಷರತ್ತು, ಸರ್ಕಾರಕ್ಕೆ ಬಿಗ್‌ ರಿಲೀಫ್‌

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
No Result
View All Result
Home ಸುದ್ದಿ ರಾಜ್ಯ

ಧರ್ಮಸ್ಥಳ ಕೇಸಲ್ಲಿ ಭಾರೀ ಟ್ವಿಸ್ಟ್: ಬೋಳಿಯಾರ್ ಕಾಡಲ್ಲಿ ಶಾಲಾ ಬಾಲಕಿ ಶವ ತೋರಿಸಿದನಾ ಅನಾಮಿಕ!

editor tv by editor tv
August 8, 2025
in ರಾಜ್ಯ
0
ಧರ್ಮಸ್ಥಳ ಕೇಸಲ್ಲಿ ಭಾರೀ ಟ್ವಿಸ್ಟ್: ಬೋಳಿಯಾರ್ ಕಾಡಲ್ಲಿ ಶಾಲಾ ಬಾಲಕಿ ಶವ ತೋರಿಸಿದನಾ ಅನಾಮಿಕ!
1.9k
VIEWS
Share on FacebookShare on TwitterShare on Whatsapp

ಧರ್ಮಸ್ಥಳ ಸೌಜನ್ಯ ಪ್ರಕರಣದ ತನಿಖೆಯಲ್ಲಿ ಹೊಸ ತಿರುವು ಪಡೆದುಕೊಂಡಿದ್ದು, ಅನಾಮಿಕ ದೂರುದಾರ ಬೋಳಿಯಾರ್‌ನಲ್ಲಿ ಶಾಲಾ ಬಾಲಕಿಯ ಶವ ಹೂತಿರುವ ಸ್ಥಳವನ್ನು ಗುರುತಿಸಿದ್ದಾನೆ ಎನ್ನಲಾಗಿದೆ. ಈ ಘಟನೆಯು ಪ್ರಕರಣಕ್ಕೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.

ದಕ್ಷಿಣ ಕನ್ನಡ (ಆ.08): ಧರ್ಮಸ್ಥಳ ಸೌಜನ್ಯ ಪ್ರಕರಣದ ತನಿಖೆ ಹೊಸ ತಿರುವು ಪಡೆದುಕೊಂಡಿದ್ದು, ಸರಣಿ ಕೊಲೆಗಳ ಬಗ್ಗೆ ದೂರು ನೀಡಿದ್ದ ಅನಾಮಿಕ ದೂರುದಾರನೊಬ್ಬ ಬೋಳಿಯಾರ್‌ನಲ್ಲಿ ಶಾಲಾ ಬಾಲಕಿಯೊಬ್ಬಳ ಶವ ಹೂತುಹಾಕಿದ್ದ ಜಾಗವನ್ನು ಗುರುತಿಸಿದ್ದಾನೆ ಎನ್ನಲಾಗಿದೆ. ಈ ಘಟನೆಯು ಪ್ರಕರಣದ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸಿದೆ.

ಜುಲೈ 11ರಂದು ನ್ಯಾಯಾಲಯಕ್ಕೆ ಒಪ್ಪಿಸಲಾದ ಬುರುಡೆಯ ಬಗ್ಗೆ ಮಾಹಿತಿ ನೀಡಿರುವ ಅನಾಮಿಕ ದೂರುದಾರ, ಬೆಳ್ತಂಗಡಿ ಸಮೀಪದ ಬೋಳಿಯಾರ್‌ ಕಾಡಿನೊಳಗೆ ಎಸ್ಐಟಿ ತಂಡದೊಂದಿಗೆ ತೆರಳಿದ್ದಾನೆ. ಕಲ್ಲೇರಿ ಪೆಟ್ರೋಲ್ ಪಂಪ್‌ನಿಂದ 500 ಮೀಟರ್ ದೂರದಲ್ಲಿ ಶಾಲಾ ಬಾಲಕಿಯೊಬ್ಬಳ ಶವವನ್ನು ಹೂತುಹಾಕಲಾಗಿತ್ತು ಎಂದು ದೂರುದಾರ ಈ ಹಿಂದೆ ಹೇಳಿಕೆ ನೀಡಿದ್ದ. ಆದರೆ, ಈಗ ಅವನು ಗುರುತಿಸಿದ ಜಾಗ ಪೆಟ್ರೋಲ್ ಪಂಪ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ.

ಶಾಲಾ ಬಾಲಕಿಯ ಕೊಲೆ ಆರೋಪದ ಬಗ್ಗೆ ದೂರುದಾರನ ಮಾಹಿತಿ:


ದೂರುದಾರನು 2010ರಲ್ಲಿ ನಡೆದ ಅತ್ಯಾ*ಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ನೀಡಿದ ದೂರು ವಿಲಕ್ಷಣವಾಗಿದೆ. ಆತ ಹೇಳುವ ಪ್ರಕಾರ, ‘2010ರಲ್ಲಿ ಕಲ್ಲೇರಿಯಲ್ಲಿರುವ ಪೆಟ್ರೋಲ್ ಬಂಕ್‌ನಿಂದ ಸುಮಾರು 500 ಮೀಟರ್ ದೂರದಲ್ಲಿರುವ ಸ್ಥಳಕ್ಕೆ ನನ್ನನ್ನು ಮೇಲ್ವಿಚಾರಕರು ಕಳುಹಿಸಿದರು. ಅಲ್ಲಿ ನಾನು ಹದಿಹರೆಯದ ಹುಡುಗಿಯ ದೇಹವನ್ನು ಕಂಡೆನು. ಅವಳ ವಯಸ್ಸು ಅಂದಾಜು 12 ರಿಂದ 15 ವರ್ಷಗಳ ನಡುವೆ ಇರಬಹುದು. ಅವಳು ಶಾಲಾ ಸಮವಸ್ತ್ರದ ಶರ್ಟ್ ಧರಿಸಿದ್ದಳು, ಆದರೆ ಲಂಗ ಮತ್ತು ಒಳಉಡುಪುಗಳು ಇರಲಿಲ್ಲ. ಅವಳ ದೇಹದ ಮೇಲೆ ಲೈಂಗಿಕ ಆಕ್ರಮಣದ ಸ್ಪಷ್ಟ ಲಕ್ಷಣಗಳಿದ್ದವು ಮತ್ತು ಕತ್ತು ಹಿಸುಕಿರುವ ಗುರುತುಗಳಿದ್ದವು. ನನಗೆ ಗುಂಡಿ ಅಗೆದು ಅವಳನ್ನು ಮತ್ತು ಅವಳ ಶಾಲಾ ಬ್ಯಾಗ್‌ ಅನ್ನು ಹೂಳಲು ನಿರ್ದೇಶಿಸಲಾಗಿತ್ತು. ಆ ಸನ್ನಿವೇಶವು ನನಗೆ ಇಂದಿಗೂ ಮಾಸಿಲ್ಲ.

ಈಗ ಇದೇ ಜಾಗದಲ್ಲಿ ಉತ್ಖನನ ನಡೆಸುವ ಬಗ್ಗೆ ಎಸ್ಐಟಿ ತಂಡವು ಯೋಜಿಸಿದೆ. ಅನಾಮಿಕ ದೂರುದಾರನು ಶವ ಹೂತಿದ್ದ ಜಾಗವನ್ನೇ ತೋರಿಸಿದ್ದಾನೋ ಅಥವಾ ಈ ಹಿಂದೆ ನ್ಯಾಯಾಲಯಕ್ಕೆ ಒಪ್ಪಿಸಲಾದ ಬುರುಡೆಯನ್ನು ಅಗೆದು ತಂದ ಜಾಗವನ್ನೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಪದ್ಮಲತಾ ಪ್ರಕರಣದ ಪ್ರಸ್ತಾಪ:

ಇದೇ ಸಂದರ್ಭದಲ್ಲಿ, 1986ರಲ್ಲಿ ಕೊಲೆಯಾದ ಪದ್ಮಲತಾ ಪ್ರಕರಣದ ಪ್ರಸ್ತಾಪವೂ ಬಂದಿದೆ. ಆಕೆಯ ಮನೆ ಸಮೀಪವೇ ‘ಪಾಯಿಂಟ್ ನಂ 15’ ಎಂದು ಗುರುತಿಸಲಾದ ಸ್ಥಳವಿದ್ದು, ಪದ್ಮಲತಾ ಅವರ ಸಂಬಂಧಿ ಮತ್ತು ಎರಡನೇ ದೂರುದಾರರಾದ ಜಯಂತ್ ಟಿ. ಅವರು ಈ ಬಗ್ಗೆ ಎಸ್ಐಟಿ ತಂಡಕ್ಕೆ ದೂರು ನೀಡಿದ್ದರು. ಆದರೆ, ಪದ್ಮಲತಾ ಮೃತದೇಹ ನದಿಯಲ್ಲಿ ಪತ್ತೆಯಾಗಿತ್ತು ಎಂಬುದು ಗಮನಾರ್ಹ.

ಅನಾಮಿಕ ದೂರುದಾರನು ಬಹಳ ನಿಖರವಾಗಿ ಬೋಳಿಯಾರ್ ಕಾಡಿಗೆ ತೆರಳಿದ್ದು, ಬುರುಡೆ ಅವಶೇಷಗಳ ಸ್ಥಳವನ್ನೋ ಅಥವಾ ಶಾಲಾ ಬಾಲಕಿಯ ಮೃತದೇಹದ ಸ್ಥಳವನ್ನೋ ತೋರಿಸಿದ್ದಾನೋ ಎಂಬುದು ಮತ್ತಷ್ಟು ನಿಗೂಢವಾಗಿಯೇ ಉಳಿದಿದೆ. ಸತ್ಯ ಹೊರಬರಲು ಎಸ್ಐಟಿ ತಂಡದ ಮುಂದಿನ ಕ್ರಮಗಳು ನಿರ್ಣಾಯಕವಾಗಿವೆ. ಭಾರೀ ಭದ್ರತೆಯೊಂದಿಗೆ ಉಪ್ಲು ಮತ್ತು ಎವಿಡೆನ್ಸ್ ಬಾಕ್ಸ್ ಜೊತೆಗೆ ತೆರಳಿರುವ ಎಸ್ಐಟಿ ತಂಡ, ಶೀಘ್ರದಲ್ಲೇ ಈ ನಿಗೂಢವನ್ನು ಭೇದಿಸುವ ಸಾಧ್ಯತೆ ಇದೆ

Previous Post

ಮತಗಳ್ಳತನ ಆರೋಪ; ಮೋದಿಗೆ ಅಧಿಕಾರದಲ್ಲಿರಲು ನೈತಿಕತೆ ಇಲ್ಲ, ರಾಜೀನಾಮೆ ಕೊಡಬೇಕು; CM ಸಿದ್ದರಾಮಯ್ಯ

Next Post

ಮಂಗಳೂರು | ಬ್ಯೂಟಿಪಾರ್ಲರ್ ಹೆಸರಿನಲ್ಲಿ ಮಸಾಜ್ ದಂಧೆ; ಹಲ್ಲೆ, ಬೆತ್ತಲೆ ವೀಡಿಯೋ ಮಾಡಿ ಬೆದರಿಕೆ: ಆರೋಪ

Next Post

ಮಂಗಳೂರು | ಬ್ಯೂಟಿಪಾರ್ಲರ್ ಹೆಸರಿನಲ್ಲಿ ಮಸಾಜ್ ದಂಧೆ; ಹಲ್ಲೆ, ಬೆತ್ತಲೆ ವೀಡಿಯೋ ಮಾಡಿ ಬೆದರಿಕೆ: ಆರೋಪ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.