
ಆತ ಹೆಡ್ ಕಾನ್ಸ್ಟೇಬಲ್ ಒಂದೇ ಠಾಣೆಯಲ್ಲಿ ಸುಮಾರು ಮೂರು ವರ್ಷಗಳಿಂದ ಕೆಲಸ ಮಾಡಿದ್ದ ಅನುಭವ ಹೊಂದಿದ್ದ. ಉತ್ತಮ ಜನಸ್ನೇಹಿ ಪೊಲೀಸ್ ಆಗಿ ಕೆಲಸ ಮಾಡ್ತಿದ್ದ, ತನ್ನ ಸಹಪಾಟಿಳೊಂದಿಗೂ ಫ್ರೆಂಡ್ಲೀಯಾಗಿಯೇ ಇದ್ದ. ನಿನ್ನೆ ರಾತ್ರಿ ಜಾತ್ರೆಗೆ ಬಂದೋಬಸ್ತ್ ನೈಟ್ ಡ್ಯೂಟಿ ಮುಗಿಸಿ ರಾತ್ರಿ ಮೂರು ಗಂಟೆಗೆ ಮನೆಗೆ ಹೋಗಿ ಸ್ವಲ್ಪ ಸಮಯ ರೆಸ್ಟ್ ಮಾಡಿದ್ದಾನೆ. ಪುನಃ ಮುಂಜಾನೆ ಏಳೂವರೆಗೆ ಡ್ಯೂಟಿಗೆ ಹೋಗ್ಬೇಕು ಅಂತ ಮನೆಯವರಿಗೆ ಹೇಳಿ ಠಾಣೆ ಬಳಿ ಬಂದವನು ಠಾಣೆ ಆವರಣದ ರೆಸ್ಟ್ ರೂಮ್ನಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ.
ಬೆಟ್ಟಿಂಗ್ ಗೀಳಿಗೆ ಬಿದ್ದಿದ್ದ ಹೆಡ್ ಕಾನ್ಸ್ಟೇಬಲ್
ಹೆಸರು ರಾಜಶೇಖರ್, ವೃತ್ತಿ, ಪೊಲೀಸ್ ಹೆಡ್ ಕಾನ್ಸ್ಟೇಬಲ್. ಆದ್ರೆ, ಹೆಚ್ಚಿನ ಹಣ ಸಂಪಾದನೆ ಆಸೆಯಿಂದ ಈ ಪೊಲೀಸಪ್ಪ, ಬೆಟ್ಟಿಂಗ್ ಗೀಳಿಗೆ ಬಿದ್ದು, ಲಕ್ಷ ಲಕ್ಷ ಹಣ ಕಳೆದುಕೊಂಡು ತಾನು ಕೆಲಸ ಮಾಡ್ತಿದ್ದ ಮಂಚೇನಹಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ಜೀವ ತೆಗೆದುಕೊಂಡಿದ್ದಾನೆ.
ಬೆಟ್ಟಿಂಗ್ಗೆ ಪೊಲೀಸಪ್ಪ ಬಲಿ!
- ಕಳೆದ 25 ವರ್ಷಗಳಿಂದ ಪೊಲೀಸ್ ಹುದ್ದೆಯಲ್ಲಿದ್ದ ರಾಜಶೇಖರ್
- ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಕೆಲಸ
- ಕೈ ತುಂಬಾ ಸಂಬಳ, ಸಂಸಾರದೊಂದಿಗೆ ನೆಮ್ಮದಿಯಿಂದ ಇದ್ದರು
- ಆದ್ರೆ, ರಾತ್ರೋ ರಾತ್ರಿ ಶ್ರೀಮಂತ ಆಗ್ಬೇಕೆಂದು ಬೆಟ್ಟಿಂಗ್ ಚಟ
- ರಮ್ಮಿ ಸರ್ಕಲ್ನಲ್ಲಿ 40 ಲಕ್ಷ ಹಣ ಕಳೆದುಕೊಂಡ ರಾಜಶೇಖರ್
- ಇಷ್ಟೇ ಅಲ್ಲದೆ ಕಾನ್ಸ್ಟೇಬಲ್ ರಾಜಶೇಖರ್ ಸಾಲ ಮಾಡಿದ್ದರು
- ಇದೇ ವಿಚಾರಕ್ಕೆ ಮನೆಯಲ್ಲಿ ಮನಸ್ತಾಪ, ಮನನೊಂದು ದುಡುಕಿನ ನಿರ್ಧಾರ
ಘಟನೆ ಸಂಬಂಧ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಹಾಗೂ ಮಂಚೇನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡ ಮಂಚೇನಹಳ್ಳಿ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. ಬೆಟ್ಟಿಂಗ್ ಬಗ್ಗೆ ಜನಸಾಮನ್ಯರಿಗೆ ಬುದ್ಧಿ ಹೇಳಬೇಕಾಗಿದ್ದ ಪೊಲೀಸ್ ಕಾನ್ಸ್ಟೇಬಲ್, ಬೆಟ್ಟಿಂಗ್ ಗೀಳಿಗೆ ಬಿದ್ದು ಪ್ರಾಣ ಕಳೆದುಕೊಂಡು.. ಇಬ್ಬರು ಮಕ್ಕಳು ಮಡದಿಯನ್ನು ಅನಾಥರನ್ನಾಗಿ ಮಾಡಿರುವುದು ನಿಜಕ್ಕೂ ದುರಂತ.