Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
No Result
View All Result
Home ಸುದ್ದಿ ರಾಜ್ಯ

ಶಿಶು ಮರಣ ತಗ್ಗಿಸಿದ ಅಮೃತ – ಜೀವ ಸಂಜೀವಿನಿಯಾಗಿ ಲೇಡಿಗೋಷನ್ ಹ್ಯೂಮನ್ ಮಿಲ್ಕ್ ಬ್ಯಾಂಕ್

editor tv by editor tv
July 5, 2025
in ರಾಜ್ಯ
0
ಶಿಶು ಮರಣ ತಗ್ಗಿಸಿದ ಅಮೃತ – ಜೀವ ಸಂಜೀವಿನಿಯಾಗಿ ಲೇಡಿಗೋಷನ್ ಹ್ಯೂಮನ್ ಮಿಲ್ಕ್ ಬ್ಯಾಂಕ್
1.9k
VIEWS
Share on FacebookShare on TwitterShare on Whatsapp

ಮಂಗಳೂರು: ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮೂರು ವರ್ಷ ಹಿಂದೆ ಆರಂಭಗೊಂಡಿರುವ ‘ರೋಟರಿ ಅಮೃತ- ಎದೆಹಾಲಿನ ಘಟಕ’ ಅವಧಿ ಪೂರ್ವ ಜನನದ ಶಿಶುಗಳ ಜೀವ ಉಳಿಸುವಲ್ಲಿ ಜೀವ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿವೆ.

ರೋಟರಿ ಕ್ಲಬ್ ಮಂಗಳೂರು ವತಿಯಿಂದ 2022ರ ಮಾರ್ಚ್‌ನಲ್ಲಿ 35 ಲಕ್ಷ ರೂ. ಮೊತ್ತದಲ್ಲಿ ಮಾನವೀಯ ಸೇವೆ ರೂಪದಲ್ಲಿ ಪ್ರಾರಂಭವಾಗಿರುವ ಹ್ಯೂಮನ್ ಮಿಲ್ಕ್ ಬ್ಯಾಂಕ್ ಘಟಕದಲ್ಲಿ 8,265 ತಾಯಂದಿರು ದಾನ ಮಾಡಿರುವ 508 ಲೀ. ಹಾಲನ್ನು ಪ್ಯಾಶ್ಚರೀಕರಣ ಮಾಡಿದ್ದು, ತೀವ್ರ ನಿಗಾ ಘಟಕದಲ್ಲಿದ್ದ 366 ನವಜಾತ ಶಿಶುಗಳಿಗೆ ನೀಡಲಾಗಿದೆ.

‘ಅವಧಿ ಪೂರ್ವ ಅಂದರೆ, ಆರೇಳು ತಿಂಗಳಲ್ಲಿ ಮಗು ಹುಟ್ಟಿದರೆ, ತಾಯಿಯಲ್ಲಿ ಹಾಲಿರುವುದಿಲ್ಲ. ನೈಸರ್ಗಿಕ ಹಾಲಿನಿಂದ ಮಗುವಿನ ಹಸಿವು ನೀಗಿಸಲು ಮಿಲ್ಕ್ ಬ್ಯಾಂಕ್ ವರದಾನವಾಗಿದ್ದು, ಅದರಲ್ಲಿ ತಾಯಿ ಹಾಲಿನ ಎಲ್ಲ ಪೌಷ್ಟಿಕಾಂಶ ಇರುತ್ತವೆ. ಅವಧಿ ಪೂರ್ವ ಜನನದ ಶಿಶುವಿನ ಹೃದಯ, ಶ್ವಾಸಕೋಶ, ಕರುಳು ಸಹಿತ ಅವಯವಗಳು ಬೆಳೆದಿರುವುದಿಲ್ಲ. ನೈಸರ್ಗಿಕ ಹಾಲು ಕೊಟ್ಟರೆ ಬೆಳವಣಿಗೆ ಸುಲಭವಾಗುತ್ತದೆ.

ಸಾಮಾನ್ಯವಾಗಿ ಅವಧಿ ಪೂರ್ವ ಶಿಶುಗಳಲ್ಲಿ ಎನ್‌ಇಸಿ- ನೆಕ್ರೋಟೈಸಿಂಗ್ ಎಂಟಿರೊಕೊಲಿಟಿಸ್ ಅಂದರೆ ಶೀತಲ ಘಟಕದಲ್ಲಿ ಶೇಖರಿಸಿರುವ ಎದೆ ಹಾಲು. ಕರಳು ಕೊಳತಂಥ ಸ್ಥಿತಿ ಇರುತ್ತದೆ. ತಾಯಿಯ ನೈಸರ್ಗಿಕ ಹಾಲು ಕೊಟ್ಟರೆ, ಅಂತಹ ಕರುಳಿಗೆ ರಕ್ಷಣೆ ಸಿಗುತ್ತದೆ. ಮಿಲ್ಕ್ ಬ್ಯಾಂಕ್ ಸ್ಥಾಪನೆಯಾದ ಬಳಿಕ ಯಾವುದೇ ಎನ್‌ಇಸಿ ಸಮಸ್ಯೆ ಉಲ್ಬಣಗೊಂಡಿಲ್ಲ. ಆರ್‌ಒಪಿ- ಕಣ್ಣಿನ, ಬಿಪಿಡಿ-ಶ್ವಾಸಕೋಶದ ಸಮಸ್ಯೆಗೂ ರಾಮಬಾಣ. ಹೀಗಾಗಿ, ಶಿಶುಗಳ ಸಾವಿನ ಪ್ರಮಾಣ ಕಡಿಮೆಯಾಗಿ, ಲೇಡಿಗೋಷನ್ ಎನ್‌ಐಸಿಯುಗೆ ಈ ಘಟಕ ದೇವನೇ ಕೊಟ್ಟ ವರ’.

ಅವಧಿ ಪೂರ್ವ ಜನಿಸಿದ ಶಿಶುಗಳಲ್ಲಿ ಶೇ.32ರಷ್ಟು ಸಾವನ್ನಪ್ಪುತ್ತವೆ. ಎದೆ ಹಾಲು ಘಟಕದ ಪರಿಕಲ್ಪನೆಯಿಂದಾಗಿ ಈ ಶಿಶುಗಳು ಬದುಕುಳಿಯುವಂತಾಗಿದೆ. ಯಾವುದೇ ಕೃತಕ ಹಾಲು ಸಂಪೂರ್ಣ ಆಹಾರವಲ್ಲ, ಎದೆ ಹಾಲು ಮಾತ್ರ ಪರಿಪೂರ್ಣ ಹಾಲಾಗಿದ್ದು, ಶಿಶು ಮರಣ ಸಂಖ್ಯೆ ಕಡಿಮೆ ಮಾಡುವಲ್ಲಿ ಪ್ರಮುಖ ಕೊಡುಗೆ ನೀಡಿದೆ ಎಂದು ಲೇಡಿಗೋಷನ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್. ತಿಳಿಸಿದ್ದಾರೆ.

ತಾಯಿ ಎದೆಯಿಂದ ಪ್ರಥಮ ಮೂರು ದಿನಗಳಲ್ಲಿ ಸಿಗುವ ಹಳದಿ ಬಣ್ಣ ಗಾಢವಾದ ಹಾಲು- ಕೊಲೊಸ್ಟಂ ನಿಸರ್ಗದ ಪ್ರಥಮ ವ್ಯಾಕ್ಸಿನ್. ಇಲ್ಲಿ ದಾನ ಮಾಡುವ ಹಾಲಿನಲ್ಲಿ ಕೊಲೊಸ್ಟಂ ಅಂಶ ಕೂಡ ಸಿಗುವ ಮೂಲಕ ಪರೋಕ್ಷವಾಗಿ ಮಗುವಿನ ಬೆಳವಣಿಗೆಗೆ ನೆರವಾಗುತ್ತದೆ. ಇಲ್ಲಿ 27 ವಾರದಲ್ಲಿ ಹುಟ್ಟಿದ ಅತ್ಯಂತ ಕಡಿಮೆ ಅವಧಿಯ, ಅತ್ಯಂತ ಕಡಿಮೆ 718 ಗ್ರಾಂ ತೂಕದ ಶಿಶುವಿಗೂ ಜೀವದಾನ ಸಿಕ್ಕಿದ್ದು, ಇಂತಹ ಜಾದೂಗಳು ಹ್ಯೂಮನ್ ಮಿಲ್ಕ್ ಬ್ಯಾಂಕ್‌ನಿಂದ ಮಾತ್ರ ಸಾಧ್ಯ. ಅಧಿಕ ಹಾಲಿರುವ ತಾಯಂದಿರು, ಇನ್ನೊಬ್ಬ ತಾಯಿ-ಶಿಶುಗೆ ಹಾಲು ಕೊಟ್ಟ ಸಂತೃಪ್ತ ಭಾವ ಇರುತ್ತದೆ.

ಹಾಲು ಕೊಡುವ ಕ್ರಮ: ಕೆಲವು ಬಾಣಂತಿಯರಲ್ಲ ಎದೆ ಹಾಲು ಹೆಚ್ಚಿದ್ದು, ನೋವು ಅನುಭವಿಸುತ್ತಿರುತ್ತಾರೆ. ಅಂಥವರು ವೈದ್ಯರ ಸಲಹೆಯಂತೆ ದಾನ ಮಾಡಲು ಬಯಸುತ್ತಾರೆ. ಅವರಿಗೆ ಆಪ್ತ ಸಮಾಲೋಚನೆ ನಡೆಸಿ, ಘಟಕಕ್ಕೆ ಕಳುಹಿಸಲಾಗುತ್ತದೆ.

ಕೆ-ಶೀಟ್ ಸಹಿತ ಬರುವ ತಾಯಂದಿರ ಫೈಲ್ ಚೆಕ್ ಮಾಡಿ, ಸಂಪೂರ್ಣ ಆರೋಗ್ಯವಂತರು ಎಂದು ಖಾತ್ರಿಯಾದ ಬಳಿಕವೇ ಹಾಲು ಪಡೆಯಲಾಗುತ್ತದೆ. ತಾಯಿಗೆ ಸೆರೋಲಜಿ ಪರೀಕ್ಷೆಗಳಾದ ಹೆಚ್‌ಐವಿ, ಹೆಚ್‌ಬಿಎಸ್‌ಎಜಿ. ವಿಡಿಆರ್‌ಎಲ್, ಹೆಚ್‌ಸಿವಿ ಪರೀಕ್ಷೆ ಮಾಡಲಾಗುತ್ತವೆ. ಎಲ್ಲವೂ ನೆಗೆಟಿವ್ ಇರಬೇಕು ಎನ್ನುತ್ತಾರೆ ಎದೆ ಹಾಲು ಘಟಕದ ಭವ್ಯಾ.

ಪಡೆದ ಹಾಲನ್ನು ಮೈನಸ್ 20ರಲ್ಲಿ ಮೂರು ತಿಂಗಳು ಇಡಬಹುದು. ಅಷ್ಟರೊಳಗೆ ಪ್ಯಾಶ್ಚರೀಕರಣ ಮಾಡಿ, ಸಂಗ್ರಹಿಸಿದ ದಿನಾಂಕದಿಂದ ಆರು ತಿಂಗಳು ಶೇಖರಿಸಿಡಬಹುದು. ಪ್ಯಾಶ್ಚರೀಕರಣ ನಡೆದ ತಕ್ಷಣ ಕಲ್ಟರ್ ಟೆಸ್ಟ್‌ಗೆ ಕಳುಹಿಸಿ, ಈ ಹಾಲು ಶಿಶುಗಳಿಗೆ ಉಣಿಸಬಹುದು ಎಂಬ ಪ್ರಯೋಗಾಲಯದ ವರದಿ ಬಂದ ಬಳಿಕಷ್ಟೇ ಎನ್‌ಐಸಿಯು ಶಿಶುಗಳಿಗೆ ಬಳಕೆ ಮಾಡಲಾಗುತ್ತದೆ.

8,265 ತಾಯಂದಿರಿಂದ ಎದೆಹಾಲು ದಾನ
508 ಲೀ. ಎದೆಹಾಲು ಸಂಗ್ರಹ
ತೀವ್ರ ನಿಗಾ ಘಟಕದಲ್ಲಿದ್ದ 366 ನವಜಾತ ಶಿಶುಗಳಿಗೆ ನೀಡಿಕೆ

Previous Post

ಮಥುರಾ ಈದ್ಗಾ ಮಸೀದಿ ವಿವಾದಿತ ಪ್ರದೇಶ : ಷೋಷಣೆಗೆ ಕೋರ್ಟ್‌ ನಕಾರ

Next Post

ಮಂಗಳೂರು | ಹಿಂದೂ ಮುಖಂಡನ ಮೊಬೈಲ್‍ನಲ್ಲಿ ಕರಾವಳಿ ರಾಜಕಾರಣಿಯ 50 ಅಶ್ಲೀಲ ವಿಡಿಯೋ!

Next Post
ಮಂಗಳೂರು | ಹಿಂದೂ ಮುಖಂಡನ ಮೊಬೈಲ್‍ನಲ್ಲಿ ಕರಾವಳಿ ರಾಜಕಾರಣಿಯ 50 ಅಶ್ಲೀಲ ವಿಡಿಯೋ!

ಮಂಗಳೂರು | ಹಿಂದೂ ಮುಖಂಡನ ಮೊಬೈಲ್‍ನಲ್ಲಿ ಕರಾವಳಿ ರಾಜಕಾರಣಿಯ 50 ಅಶ್ಲೀಲ ವಿಡಿಯೋ!

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.