ಮಂಗಳೂರು : ದುಷ್ಕರ್ಮಿಗಳಿಂದ ನಿನ್ನೆ ಕೊಲೆಯಾದ ರಹೀಂ ಅವರ ಮೃತದೇಹವನ್ನು ಬಾರಿ ಜನಸ್ತೋಮ ದೊಂದಿಗೆ ಬಂಟ್ವಾಳ ದ ಕೊಳತ್ತಾಮಜಲಿಗೆ ಮೆರವಣಿಗೆ ಮೂಲಕ ಕೊಂಡೋಯ್ಯಳಗುತ್ತಿದೆ.
ಕುತ್ತಾರ್ ಮದನಿ ನಗರ ಮಸೀದಿಯಲ್ಲಿ ರಹೀ, ಅವರ ಮಯ್ಯತ್ ಸ್ನಾನ ಮಾಡಲಾಯಿತು. ನಂತರ ಮಯ್ಯತ್ ನಮಾಝ್ ಬಳಿಕ ಪೊಲೀಸ್ ಬಂದೋಬಸ್ತ್ನಲ್ಲಿ ಮೃತದೇಹವನ್ನು ಕೊಂಡೊಯ್ಯಲಾಯಿತು.
ಕುತ್ತಾರ್ , ತೊಕ್ಕೊಟ್ಟು, ಪಂಪ್ ವೆಲ್, ಮಿತ್ತಬೈಲ್ ಮಾರ್ಗವಾಗಿ ಕೊಳತ್ತಮಜಲಿನ ಮನೆಗೆ ಕೊಂಡೊಯ್ದು, ನಂತರ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ ಆವರಣದಲ್ಲಿ ದಫನ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
