Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ

    ಕಾಂಗ್ರೆಸ್​ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

    ಧರ್ಮಸ್ಥಳ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ

    ಕಾಂಗ್ರೆಸ್​ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

    ಧರ್ಮಸ್ಥಳ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
No Result
View All Result
Home ಸುದ್ದಿ ರಾಷ್ಟ್ರೀಯ

ಮೈಸೂರು ಆಂಟಿ, ಮಗನ ಹತ್ಯೆ ಮಾಡಿ ಚಾಟ್ಸ್‌ ಮಾರ್ತಿದ್ದ ಹಂತಕ, 1 ವರ್ಷದ ಕೋಲ್ಡ್‌ ಬ್ಲಡ್‌ ಕೊಲೆ ಬಯಲಿಗೆ!‌

editor tv by editor tv
March 24, 2024
in ರಾಷ್ಟ್ರೀಯ
0
ಮೈಸೂರು ಆಂಟಿ, ಮಗನ ಹತ್ಯೆ ಮಾಡಿ ಚಾಟ್ಸ್‌ ಮಾರ್ತಿದ್ದ ಹಂತಕ, 1 ವರ್ಷದ ಕೋಲ್ಡ್‌ ಬ್ಲಡ್‌ ಕೊಲೆ ಬಯಲಿಗೆ!‌
1.9k
VIEWS
Share on FacebookShare on TwitterShare on Whatsapp

ಒಂದು ವರ್ಷದ ಬಳಿಕ ಪತ್ತೆಯಾಯ್ತು ಕೋಲ್ಡ್‌ ಬ್ಲಡ್‌ ಮರ್ಡರ್‌ ಕೇಸ್. ಆಕೆಯ ಲಗೇಜ್‌ ಬ್ಯಾಗ್‌ನಲ್ಲೆ ಅಮ್ಮ-ಮಗನ ಶವ ಪ್ಯಾಕ್‌ ಮಾಡಿ ಬಾವಿಗೆ ಎಸೆದು ಬಂದಿದ್ದ ಕ್ರೂರಿ. ತಾಯಿಯ ಹತ್ಯೆಗೆ ಮಗ ಸಾಕ್ಷಿಯಾಗ್ತಾನೆ ಅಂತಾ ಆತನನ್ನೂ ಕ್ರೂರವಾಗಿ ಕೊಂದಿದ್ದ ಕಿರಾತಕ ಅರೆಸ್ಟ್ 

ವಿಜಯಪುರ (ಮಾ.24): ಒಂದು ವರ್ಷದ ಹಿಂದೆ ವಿಜಯಪುರದಲ್ಲಿ ನಡೆದಿದ್ದ ಕೊಲ್ಡ್‌ ಬ್ಲಡ್ ಮರ್ಡರ್‌ ಕೇಸ್‌ವೊಂದು ಬಯಲಿಗೆ ಬಂದಿದೆ. ಮೈಸೂರು ಮೂಲದ ಬ್ಯೂಟಿ ಲೇಡಿ ಆಂಡ್‌ ಮಗನ ಜೋಡಿ ಕೊಲೆ ಯಾವುದೇ ಕ್ಲೂ ಇಲ್ಲದೆ ಪೊಲೀಸರಿಗೆ ಮಿಸ್ಟೆರಿಯಾಗಿ ಉಳಿದಿತ್ತು. ಬಾವಿಯೊಂದರಲ್ಲಿ ಬಿದ್ದಿದ್ದ ಬ್ಯಾಗ್‌ಗಳಲ್ಲಿ ಅಡಗಿಸಿಟ್ಟಿದ್ದ ಜೋಡಿ ಹೆಣಗಳ ರಹಸ್ಯವನ್ನ ಕೊನೆಗು ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಭೇದಿಸಿದ್ದಾರೆ. ಈ ಜೋಡಿ ಕೊಲೆ ಪ್ರಕರಣದ ಹಿಂದಿನ ಕ್ರೈಂ ಕಥೆ ಮಾತ್ರ ಥ್ರಿಲ್ಲರ್‌ ಮೂವಿಯನ್ನು ಮೀರಿಸುವಂತಿದೆ..

ವರ್ಷದ ಹಿಂದಿನ ಕೋಲ್ಡ್‌ ಬ್ಲಡ್‌ ಮರ್ಡರ್‌ ಕೇಸ್‌ ಪತ್ತೆ!
ಅದು ಬರೊಬ್ಬರಿ ಒಂದು ವರ್ಷದ ಹಿಂದೆ ನಡೆದಿದ್ದ ಡಬಲ್‌ ಮರ್ಡರ್‌. ಮರ್ಡರ್‌ ಹಿಂದಿನ ರಹಸ್ಯ ಬಯಲಾಗಿದ್ದು ಒಂದು ವರ್ಷದ ಬಳಿಕ. ಹೌದು. ಕಳೆದ ಕಳೆದ 2023 ಮಾರ್ಚ್‌ 19 ರಂದು ತಿಕೋಟ ತಾಲೂಕಿನ ಸಿದ್ದಾಪುರ ಗ್ರಾಮದ ಬಾವಿಯೊಂದರಲ್ಲಿ ಎರಡು ಬ್ಯಾಗ್‌ ಗಳಲ್ಲಿ ಜೋಡಿ ಹೆಣಗಳು ಪತ್ತೆಯಾಗಿದ್ವು. ಕೊಳೆತು ವಿಕಾರಗೊಂಡಿದ್ದ ಹೆಣಗಳ ಗುರುತು ಪತ್ತೆ ಸಿಕ್ಕಿರಲಿಲ್ಲ. ಒಂದು ಹೆಣ್ಣು ಹಾಗೂ ಇನ್ನೊಂದು ಪುರುಷನ ಡೆಡ್‌ ಬಾಡಿ ಅನ್ನೋದು ಮಾತ್ರ ಗೊತ್ತಾಗಿತ್ತು. ಮೇಲ್ನೊಟಕ್ಕೆ ಕೊಲೆ ಎನ್ನಲಾದ ಈ ಪ್ರಕರಣ ಪೊಲೀಸರಿಗೆ ಕಗ್ಗಂಟಾಗಿತ್ತು. ಆದ್ರೆ ಕೊನೆಗೂ ಒಂದು ವರ್ಷದ ಬಳಿಕ ಈ ಕೋಲ್ಡ್‌ ಬ್ಲಡ್‌ ಮರ್ಡರ್‌ ಕೇಸನ್ನ ಗ್ರಾಮೀಣ ಠಾಣೆ ಪೊಲೀಸರು ಪತ್ತೆ ಹಚ್ಚಿ ಆರೋಪಿಯನ್ನ ಬಂಧಿಸಿದ್ದಾರೆ.

ಬ್ಯೂಟಿ ಆಂಟಿ ಜೊತೆಗಿನ ಲವ್‌ ಡಬಲ್‌ ಮರ್ಡರ್‌ನಲ್ಲಿ ಅಂತ್ಯ
ಅಂದು ವರ್ಷದ ಹಿಂದೆ ಅಪರಿಚಿತ ಹೆಣಗಳಾಗಿ ಸಿಕ್ಕಿದ್ದ ಎರಡು ಡೆಡ್‌ ಬಾಡಿಗಳು ಅಮ್ಮ ಹಾಗೂ ಮಗನದ್ದು ಅನ್ನೋದು ಈಗ ಪತ್ತೆಯಾಗಿದೆ. ಮೈಸೂರು ಮೂಲದ 35 ವರ್ಷದ ಶೃತಿ ಡಿ ಎಸ್ ಹಾಗೂ 13 ವರ್ಷದ ಮಗ ರೋಹನ್‌ ಕೊಲೆಯಾದ ಅಮ್ಮ-ಮಗ. ಮೈಸೂರಿನಲ್ಲಿ ಇದೆ ಶೃತಿ ಡಿ ಎಸ್‌ ವಿಜಯಪುರ ಮೂಲದ ಸಾಗರ್‌ ನಾಯಕ್‌ ಅನ್ನೋ ಯುವಕನನ್ನ ಪ್ರೀತಿ ಮಾಡಿದ್ದಳು. ಬಳಿಕ ಆತನನ್ನ ಹುಡುಕಿಕೊಂಡು ದಿನಾಂಕ 13 ಮಾರ್ಚ್‌ 2023 ರಂದು ವಿಜಯಪುರಕ್ಕೆ ಬಂದಿದ್ದಳು. ಸಾಗರ್‌ ಆಕೆಯನ್ನ ನಗರದ ಸಿಂದಗಿ ರಸ್ತೆಯ ಪೋರ್‌ ವೇ ಲಾಡ್ಜ್‌ ನಲ್ಲಿ ಇರಿಸಿದ್ದ.‌ ಆದ್ರೆ ಲಾಡ್ಜ್‌ ನಲ್ಲಿ ಅದೇನಾಯ್ತೋ ಗೊತ್ತಿಲ್ಲ ಸಾಗರ್‌ ಶೃತಿಯನ್ನ ಕತ್ತು ಹಿಸುಕಿ ಮರ್ಡರ್‌ ಮಾಡಿದ್ದ. ಬಳಿಕ ಈ ಕೊಲೆಗೆ ಇಂದಿಲ್ಲ ನಾಳೆ ಆಕೆಯ ಮಗ ರೋಶನ್‌ ಸಾಕ್ಷಿಯಾಗ್ತಾನೆ ಅಂತಾ ಆತನನ್ನ ಕೊಲೆ ಮಾಡಿದ್ದ.

ಶೃತಿ ಲಗೇಜ್ ಬ್ಯಾಗ್‌ ನಲ್ಲಿ ಶವಗಳನ್ನ ಸಾಗಿಸಿದ್ದ ಸಾಗರ್!
ಇನ್ನೂ ತಾಯಿ ಮಗನನ್ನ ಕೊಂದ ಕ್ರೂರಿ ಸಾಗರ್‌ ತನ್ನ ಗೆಳೆಯ ಲಕ್ಷ್ಮೀಕಾಂತ ಕುಂಬಾರ್‌ ಸಹಾಯದೊಂದಿಗೆ ಶೃತಿಯ ಬಟ್ಟೆ ತಂದಿದ್ದ ಲಗೇಜ್‌ ಬ್ಯಾಗ್‌ ಗಳನ್ನೆ ಖಾಲಿ ಮಾಡಿ ಎರಡು ಹೆಣಗಳನ್ನ ತುಂಬಿದ್ದ. ಬಳಿಕ ಸ್ಕಾರ್ಪಿಯೋ ವಾಹನ ತಂದು ರಾತ್ರೋ ರಾತ್ರಿ ಎರಡು ಹೆಣಗಳನ್ನ ಬ್ಯಾಗ್‌ ಸಮೇತ ಎಳೆದೋಯ್ದು‌ ಮಹಾರಾಷ್ಟ್ರ ಗಡಿಯಲ್ಲಿರೋ ಸಿದ್ದಾಪುರ ಗ್ರಾಮದ ಹೊರವಲಯಕ್ಕೆ ತಂದಿದ್ರು. ಆಗ ಆಕೆಯ ಇನ್ನೊಂದು ಬ್ಯಾಗ್‌ ನಲ್ಲಿದ್ದ ಬಟ್ಟೆಗಳನ್ನ ಅಲ್ಲಿದ್ದ ಕೆನಾಲ್‌ ಒಂದಕ್ಕೆ ಹಾಕಿದ್ದರು. ಖಾಲಿಯಾದ ಅದೆ ಬಾಗ್‌ ನಲ್ಲಿ ರೋಹನ್‌ ಹೆಣವನ್ನ ಹಾಕಿ ಎರಡು ಬ್ಯಾಗ್‌ ಗಳನ್ನ ಊರ ಹೊರಗಿನ ಬಾವಿಗೆ ಹಾಕಿದ್ದರು. ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದರು.

ವಾರದ ಬಳಿಕ ತೇಲಿ ಬಂದಿದ್ದ ಹೆಣವಿದ್ದ ಲಗೇಜ್‌ ಗಳು
ವಾರದ ಬಳಿಕ ಬಾವಿಯಲ್ಲಿ ಮುಳುಗಿದ್ದ ಹೆಣವಿದ್ದ ಬ್ಯಾಗ್‌ ಗಳೆರಡು ಮೇಲೆದ್ದು ಬಂದಿದ್ದವು. ಆಗ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಕೊಳೆತ ಹೆಣಗಳ ಪೋಟೊಗಳನ್ನ ಪಡೆದು ರಾಜ್ಯದ ಎಲ್ಲ ಠಾಣೆಗಳು ರವಾನಿಸಿದ್ದರು. ಎಲ್ಲಿಂದಲು ಉತ್ತರ ಬರದೆ ಇದ್ದಾಗ ಉತ್ತರ ಭಾರತದಿಂದ ಯಾರೋ ಕೊಲೆ ಮಾಡಿ ಇಲ್ಲಿ ತಂದು ಬಿಸಾಕಿರಬೇಕು ಎಂದು ಪೊಲೀಸರು ಸುಮ್ಮನಾಗಿದ್ರು. ಆದ್ರೆ ವರ್ಷದ ಬಳಿಕ ಜೋಡಿ ಕೊಲೆ ಪ್ರಕರಣಕ್ಕೆ ಮರುಜೀವ ಬಂದಿತ್ತು.

ಮೈಸೂರಿನಲ್ಲಿ ದಾಖಲಾಯ್ತು ಮಿಸ್ಸಿಂಗ್‌ ಕೇಸ್
ಇನ್ನು ಒಂದು ವರ್ಷದ ಬಳಿಕ ಕಳೆದ ಫೆಬ್ರವರಿಯಲ್ಲಿ ಮೈಸೂರು ನಗರದಲ್ಲಿ ಮಿಸ್ಸಿಂಗ್‌ ಕೇಸ್‌ ದಾಖಲಾಗಿತ್ತು. 35 ವರ್ಷದ ಶೃತಿ ಹಾಗೂ ಆಕೆಯ 13 ವರ್ಷದ ಮಗ ಒಂದು ವರ್ಷದಿಂದ ಕಾಣೆಯಾಗಿದ್ದಾರೆ ಅಂತಾ ಸಂಬಂಧಿಕರು ಮೈಸೂರಿನಲ್ಲಿ ಮಿಸ್ಸಿಂಗ್‌ ಕೇಸ್‌ ದಾಖಲಿಸಿದ್ದರು. ಇದನ್ನ ಪರಿಶೀಲಿಸಿದ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಮೈಸೂರು ಪೊಲೀಸರು ನೀಡಿರುವ ಮಾಹಿತಿ ಹಾಗೂ ಇಲ್ಲಿ ಸಿಕ್ಕ ಡೆಡ್‌ ಬಾಡಿಗಳ ಬಗೆಗಿದ್ದ ಅಲ್ಪ ಮಾಹಿತಿ ಟ್ಯಾಲಿ ಆಗೋದನ್ನ ಗಮನಿಸಿದ್ದಾರೆ. ಬಳಿಕ ತನಿಖೆಗೆ ಇಳಿದಾಗ ಇದೊಂದು ಡಬಲ್‌ ಮರ್ಡರ್‌ ಪ್ರಕರಣ ಅನ್ನೋದು ಬಯಲಿಗೆ ಬಂದಿತ್ತು.

ಆರೋಪಿ ಸಾಗರ್‌ ಸಿಕ್ಕಿಬಿದ್ದದ್ದು ಹೇಗೆ?
ಇನ್ನೂ ಶವಗಳು ಯಾರದ್ದು ಅನ್ನೋ ವಿಚಾರ ಬಯಲಾದಾಗ ಪ್ರಕರಣದ ಹಿಂದೆ ಒಬ್ಬ ಪ್ರಿಯಕರನ ಕೈವಾಡ ಇರೋದು ಪತ್ತೆಯಾಗಿದೆ. ಹಿಂದೆ ಮೈಸೂರಿನಲ್ಲಿ ವಾಸವಿದ್ದ ವಿಜಯಪುರ ನಗರದ ಸಾಯಿ ಪಾರ್ಕ್‌ ನಿವಾಸಿ ಸಾಗರ್‌ ನಾಯಕ್‌ ಇದೆ ಶೃತಿಯನ್ನ ಫೇಸ್ಬುಕ್‌ ಮೂಲಕ ಪರಿಚಯ ಮಾಡಿಕೊಂಡಿದ್ದ. ಬಳಿಕ ಆಕೆಯ ಜೊತೆಗೆ ದೈಹಿಕ ಸಂಬಂಧವನ್ನು ಬೆಳೆಸಿದ್ದ. ಆತನೇ ಈಗ ಈ ಜೋಡಿ ಕೊಲೆ ಹಿಂದಿನ ಕಿಂಗ್‌ ಪಿನ್‌ ಅನ್ನೋದು ಗೊತ್ತಾಗಿದೆ. ಸಾಗರ್‌ ನನ್ನ ಬಂಧಿಸಿ ವಿಚಾರಿಸಿದಾಗ ಇಡೀ ಕೋಲ್ಡ್‌ ಬ್ಲಡ್‌ ಮರ್ಡರ್‌ ಪ್ರಕರಣ ಬಯಲಿಗೆ ಬಂದಿದೆ.

ಮಾಡದ ತಪ್ಪಿಗೆ ಬಲಿಯಾದ 13 ವರ್ಷದ ಬಾಲಕ
ಇಬ್ಬರ ನಡುವಿನ ಗಲಾಟೆ ಏನೋ ಗೊತ್ತಿಲ್ಲ. ಆದ್ರೆ ಕೇವಲ ಶೃತಿ ಹತ್ಯೆಯ ಕೇಸ್‌ ಗೆ ಆಕೆ ಮಗ ಇಂದಿಲ್ಲ ನಾಳೆ ಸಾಕ್ಷಿಯಾದಾನು ಅಂತ ಸಾಗರ್‌ ಕೊಂದು ಹಾಕಿರೋದು ಆತನ ಕ್ರೂರತೆಗೆ ಸಾಕ್ಷಿಯಾಗಿದೆ. ತಾಯಿಯ ಶವದ ಮುಂದೆಯೇ ಆಕೆಯ ಮಗನನ್ನ ಹತ್ಯೆ ಮಾಡಿದ ಪಾಪಿ ಸಾಗರ್‌ ಇಬ್ಬರ ಹೆಣಗಳನ್ನು ಯಾವುದೇ ಹೆದರಿಕೆ ಇಲ್ಲದಂತೆ ಡಿಸ್ಪೋಜ್‌ ಮಾಡಿದ್ದ. ಕೊನೆಗು ವರ್ಷದ ಬಳಿಕ ಸಿಕ್ಕಿಬಿದ್ದಿದ್ದಾನೆ.

Previous Post

ತಮಿಳುನಾಡು ರಾಜಕೀಯ ಅಖಾಡದಲ್ಲಿ ಕರ್ನಾಟಕದ ಮಾಜಿ IAS-IPS: ಇಬ್ಬರಲ್ಲೂ ಇದೆ ಅದೊಂದು ಸಾಮ್ಯತೆ

Next Post

Video- ಮುಸ್ಲಿಂ ಕುಟುಂಬಕ್ಕೆ ಹೋಳಿ ಹಚ್ಚಿದ ಯುವಕರು.. ಜೈ ಶ್ರೀರಾಮ್ ಎನ್ನುತ್ತಾ ಅಸಭ್ಯ ವರ್ತನೆ

Next Post
Video- ಮುಸ್ಲಿಂ ಕುಟುಂಬಕ್ಕೆ ಹೋಳಿ ಹಚ್ಚಿದ ಯುವಕರು.. ಜೈ ಶ್ರೀರಾಮ್ ಎನ್ನುತ್ತಾ ಅಸಭ್ಯ ವರ್ತನೆ

Video- ಮುಸ್ಲಿಂ ಕುಟುಂಬಕ್ಕೆ ಹೋಳಿ ಹಚ್ಚಿದ ಯುವಕರು.. ಜೈ ಶ್ರೀರಾಮ್ ಎನ್ನುತ್ತಾ ಅಸಭ್ಯ ವರ್ತನೆ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.