
ಲೋಕಸಭಾ ಚುನಾವಣೆಗೆ ಪಶ್ಚಿಮ ಬಂಗಾಳದಲ್ಲಿ ಎಸ್ಡಿಪಿಐ ಕಣಕ್ಕಿಳಿಯಲಿದೆ. ಈ ಹಿಂದೆ 2019ರಲ್ಲಿ ಎಸ್ಡಿಪಿಐ ಈ ರಾಜ್ಯದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಆದರೆ ಒಂದು ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಜಂಗೀಪುರ ಲೋಕಸಭಾ ಕ್ಷೇತ್ರದಲ್ಲಿ ಎಸ್ಡಿಪಿಐ ಸ್ಪರ್ಧಿಸಿದ್ದರೂ ಹೆಚ್ಚಿನ ಮತ ಸಿಗಲಿಲ್ಲ. ಪಶ್ಚಿಮ ಬಂಗಾಳದ ಹೊರತಾಗಿ ಉತ್ತರ ಪ್ರದೇಶ, ಆಂಧ್ರಪ್ರದೇಶ, ಜಾರ್ಖಂಡ್, ಬಿಹಾರ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಎಸ್ಡಿಪಿಐ ಚುನಾವಣೆ ಎದುರಿಸಲಿದೆ.

ಮುರ್ಷಿದಾಬಾದ್ ಮಾರ್ಚ್ 01: 2024 ರ ಲೋಕಸಭೆ ಚುನಾವಣೆಯಲ್ಲಿ (Lok sabha Election) ಪಶ್ಚಿಮ ಬಂಗಾಳ ದಲ್ಲಿ (West Bengal) ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕಣಕ್ಕಿಳಿಯಲಿದ್ದು ಇದೇ ಮೊದಲ ಬಾರಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ರಾಜ್ಯದ 42 ಲೋಕಸಭಾ ಕ್ಷೇತ್ರಗಳ ಪೈಕಿ 6ರಲ್ಲಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದ್ದು ಗುರುವಾರ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಉತ್ತರ ಕೋಲ್ಕತ್ತಾ, ದಕ್ಷಿಣ ಕೋಲ್ಕತ್ತಾ, ಬಹರಂಪುರ, ಮುರ್ಷಿದಾಬಾದ್, ಜಂಗಿಪುರ, ಮಾಲ್ಡಾ ದಕ್ಷಿಣದಲ್ಲಿ ಎಸ್ಡಿಪಿಐ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಮುರ್ಷಿದಾಬಾದ್ ಜಿಲ್ಲೆಯ ಮೇಲೆ SDPI ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.ಪಕ್ಷದ ರಾಜ್ಯಾಧ್ಯಕ್ಷ ತಾಹಿದುಲ್ ಇಸ್ಲಾಂ ಮತ್ತಿತರ ಮುಖಂಡರು ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಹೆಸರು ಘೋಷಿಸಿದರು.
ಮಾಜಿ ಐಎಎಸ್ ಅಧಿಕಾರಿ ಮತ್ತು ಎಸ್ಡಿಪಿಐ ರಾಜ್ಯಾಧ್ಯಕ್ಷ ಸ್ವಪನ್ಕುಮಾರ್ ಬಿಸ್ವಾಸ್ ಉತ್ತರ ಕೋಲ್ಕತ್ತಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಯಾಸ್ಮಿನ್ ಇಸ್ಲಾಂ ದಕ್ಷಿಣ ಕೋಲ್ಕತ್ತಾದ ಅಭ್ಯರ್ಥಿ. ಅವರು ಮಹಿಳಾ ಭಾರತ ಚಳವಳಿಯ ರಾಷ್ಟ್ರೀಯ ಅಧ್ಯಕ್ಷರು ಕೂಡಾ. ಬಹರಂಪುರದಲ್ಲಿ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರೂನಾ ಲೈಲಾ ಅಭ್ಯರ್ಥಿಯಾಗಿದ್ದಾರೆ. ರಾಜ್ಯಾಧ್ಯಕ್ಷ ತಾಹಿದುಲ್ ಇಸ್ಲಾಂ ಮುರ್ಷಿದಾಬಾದ್ ಮತ್ತು ಮೊಹಮ್ಮದ್ ಸಹಾಬುದ್ದೀನ್ ಜಂಗಿಪುರದಲ್ಲಿ ಸ್ಪರ್ಧಿಸಲಿದ್ದಾರೆ.

ಈ ಹಿಂದೆ 2019ರಲ್ಲಿ ಎಸ್ಡಿಪಿಐ ಈ ರಾಜ್ಯದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಆದರೆ ಒಂದು ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಜಂಗೀಪುರ ಲೋಕಸಭಾ ಕ್ಷೇತ್ರದಲ್ಲಿ ಎಸ್ಡಿಪಿಐ ಸ್ಪರ್ಧಿಸಿದ್ದರೂ ಹೆಚ್ಚಿನ ಮತ ಸಿಗಲಿಲ್ಲ. ಪಶ್ಚಿಮ ಬಂಗಾಳದ ಹೊರತಾಗಿ ಉತ್ತರ ಪ್ರದೇಶ, ಆಂಧ್ರಪ್ರದೇಶ, ಜಾರ್ಖಂಡ್, ಬಿಹಾರ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಎಸ್ಡಿಪಿಐ ಚುನಾವಣೆ ಎದುರಿಸಲಿದೆ. ಈ ಪಕ್ಷಕ್ಕೆ ದಕ್ಷಿಣ ಭಾರತ ತಮಿಳುನಾಡು, ಕೇರಳ, ಕರ್ನಾಟಕದಲ್ಲೂ ಪ್ರಾತಿನಿಧ್ಯ ಸಿಗಲಿದೆ.
ಎಸ್ಡಿಪಿಐ ಬೆಳೆದು ಬಂದ ದಾರಿ
2009ರಲ್ಲಿ ಆರಂಭವಾದ ಪಕ್ಷ ಬಂಗಾಳದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಥವಾ ಎಸ್ಡಿಪಿಐ. ಹಸಿವು ಮತ್ತು ಭಯದಿಂದ ಮುಕ್ತಿ, ಎಲ್ಲಾ ರೀತಿಯ ಅನ್ಯಾಯ ಮತ್ತು ತಾರತಮ್ಯಗಳನ್ನು ತೊಡೆದುಹಾಕಲು, ಅಲ್ಪಸಂಖ್ಯಾತರು, ಹಿಂದುಳಿದವರು, ಬುಡಕಟ್ಟು ಮತ್ತು ದಲಿತರಿಗೆ ಸಮಾನ ಹಕ್ಕುಗಳನ್ನು ಮರುಸ್ಥಾಪಿಸಲು, ಚುನಾವಣಾ ವ್ಯವಸ್ಥೆಯನ್ನು ಶುದ್ಧೀಕರಿಸಲು, ಸಮಾಜವನ್ನು ಪ್ರಜಾಪ್ರಭುತ್ವಗೊಳಿಸಲು ಮತ್ತು ನಿಜವಾದ ಪ್ರಾತಿನಿಧಿಕ ಸರ್ಕಾರವನ್ನು ರಚಿಸಲು SDPI ಬದ್ಧವಾಗಿದೆ ಎಂದು ಪ್ರಸ್ತುತ ಪಕ್ಷ ತಮ್ಮ ವೆಬ್ಸೈಟ್ ನಲ್ಲಿ ಪಕ್ಷದ ಉದ್ದೇಶವನ್ನು ವಿವರಿಸಿದೆ.

ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪುದುಚೇರಿ, ಮಧ್ಯಪ್ರದೇಶ, ಉತ್ತರ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಿಹಾರ, ದೆಹಲಿ, ರಾಜಸ್ಥಾನ, ಹರಿಯಾಣ ಮತ್ತು ಮಣಿಪುರ ಈ 16 ರಾಜ್ಯಗಳಲ್ಲಿದೆ. ಪಕ್ಷವು ಹೆಚ್ಚಿನ ರಾಜ್ಯಗಳಲ್ಲಿ ರಾಜ್ಯ-ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನು ಹೊಂದಿದೆ.ಕೇರಳದಲ್ಲಿ 2010ರ ಸ್ಥಳೀಯ ಚುನಾವಣೆಯಲ್ಲಿ ಪಕ್ಷವು ನಾಲ್ಕು ಪುರಸಭೆಗಳಲ್ಲಿ 14 ಸ್ಥಾನಗಳನ್ನು ಗೆದ್ದುಕೊಂಡಿತು. ಇದು ಬಂಗಾಳದ ಜಂಗಿಪುರ ಸಂಸತ್ ಚುನಾವಣೆಯಲ್ಲಿ 24,000 ಮತಗಳನ್ನು ಪಡೆದುಕೊಂಡಿತು ಮತ್ತು ಗೋವಾದಲ್ಲಿ ಒಂದು ಸ್ಥಾನವನ್ನು ಗೆದ್ದಿತು