Ashraf Kammaje|
Updated on: Jul 27, 2023 | 7:23 PM

ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿಯ ಮನವಿಯ ಮೇಲೆ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರೀತಿಂಕರ್ ದಿವಾಕರ್ ಅವರು ಇಂದು(ಗುರುವಾರ) ವಿಚಾರಣೆಯನ್ನು ಪುನರಾರಂಭಿಸಿದರು
ವಾರಣಾಸಿ ಜುಲೈ 27: ಜ್ಞಾನವಾಪಿ ಮಸೀದಿಯನ್ನು (Gyanvapi mosque) ದೇವಸ್ಥಾನದ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ನಿರ್ದೇಶಿಸಿದ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧದ ಅರ್ಜಿಯ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ (Allahabad high court) ಗುರುವಾರ ಕಾಯ್ದಿರಿಸಿದೆ. ಎಎಸ್ಐ ಸಮೀಕ್ಷೆಯ ಮೇಲಿನ ತಡೆಯಾಜ್ಞೆ ಆಗಸ್ಟ್ 3 ರವರೆಗೆ ಮುಂದುವರಿಯಲಿದ್ದು, ಜಿಲ್ಲಾ ನ್ಯಾಯಾಲಯದ ಆದೇಶದ ವಿವಾದಾತ್ಮಕ ಸಮೀಕ್ಷೆ ವಿರುದ್ಧದ ಮನವಿಯ ಕುರಿತು ನ್ಯಾಯಾಲಯವು ಅಂದುತೀರ್ಪು ನೀಡಲಿದೆ.

ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿಯ ಮನವಿಯ ಮೇಲೆ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರೀತಿಂಕರ್ ದಿವಾಕರ್ ಅವರು ಇಂದು(ಗುರುವಾರ) ವಿಚಾರಣೆಯನ್ನು ಪುನರಾರಂಭಿಸಿದರು. ಮಸೀದಿ ಸಮಿತಿಯ ಪರ ವಕೀಲ ಎಸ್ಎಫ್ಎ ನಖ್ವಿ, ಐವರು ಫಿರ್ಯಾದಿದಾರರು ಸಲ್ಲಿಸಿರುವ ದಾವೆಯ ನಿರ್ವಹಣೆಗೆ ಸಂಬಂಧಿಸಿದ ವಿಷಯವು ಸುಪ್ರೀಂಕೋರ್ಟ್ನಲ್ಲಿ ಬಾಕಿ ಉಳಿದಿದ. ದೇಶದ ವಿವಿಧ ಭಾಗಗಳ ಜನರು ಪ್ರತ್ಯೇಕ ಮೊಕದ್ದಮೆಗಳನ್ನು ಹೂಡುವ ಬದಲು ದೇವಾಲಯದ ಟ್ರಸ್ಟ್ ಅಥವಾ ಉಸ್ತುವಾರಿ ಈ ಸಮಸ್ಯೆಯನ್ನು ಎತ್ತುತ್ತಿಲ್ಲ ಎಂದು ಹೇಳಿದ್ದಾರೆ.

ಮಸೀದಿ ಆವರಣವನ್ನು ತಲುಪಿದಾಗ ASI ಅಗೆಯುವ ಸಲಕರಣೆಗಳನ್ನು ತಂದಿದ್ದರು ಎಂಬುದಕ್ಕೆ ಛಾಯಾಚಿತ್ರಗಳನ್ನು ಇರಿಸಿದ್ದೇವೆ. ಅವರು ಸ್ಥಳವನ್ನು ಅಗೆಯುವ ಉದ್ದೇಶವನ್ನು ಹೊಂದಿದ್ದರು ಎಂಬುದನ್ನು ಇದು ತೋರಿಸುತ್ತದ ಎಂದು ನಖ್ವಿ ನ್ಯಾಯಾಲಯಕ್ಕೆ ತಿಳಿಸಿದರು.

ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಮಸೀದಿಯ ಎಎಸ್ಐ ಸಮೀಕ್ಷೆಗೆ ಸಲ್ಲಿಸಿದ ಅರ್ಜಿಯನ್ನು ಓದಿದ್ದು, ಪ್ರಸ್ತುತ ಕಟ್ಟಡದ ಗೋಡೆಗಳ ಮೇಲೆ ಹಿಂದೂ ಧರ್ಮದ ವಿವಿಧ ಚಿಹ್ನೆಗಳು ಇವೆ. ಮಸೀದಿಯ ಒಳಗೆ ಮತ್ತು ಪಶ್ಚಿಮ ಗೋಡೆಯ ಮೇಲೆ ಹಲವಾರು ಹಿಂದೂ ಕಲಾಕೃತಿಗಳಿವೆ ಎಂದಿದ್ದಾರೆ.