Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ, ನಾಲ್ವರು ಶಂಕಿತ ಉಗ್ರರು ವಶಕ್ಕೆ 

    ಸೋಲುವ ಭಯ.. ಒಮಾನ್​ ವಿರುದ್ಧ ಗೆಲ್ಲಲು ಹರಸಾಹಸಪಟ್ಟ ಸೂರ್ಯಕುಮಾರ್​ ಪಡೆ

    ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ

    ಕಾಂಗ್ರೆಸ್​ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

    ಧರ್ಮಸ್ಥಳ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ, ನಾಲ್ವರು ಶಂಕಿತ ಉಗ್ರರು ವಶಕ್ಕೆ 

    ಸೋಲುವ ಭಯ.. ಒಮಾನ್​ ವಿರುದ್ಧ ಗೆಲ್ಲಲು ಹರಸಾಹಸಪಟ್ಟ ಸೂರ್ಯಕುಮಾರ್​ ಪಡೆ

    ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ

    ಕಾಂಗ್ರೆಸ್​ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

    ಧರ್ಮಸ್ಥಳ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
No Result
View All Result
Home ಸುದ್ದಿ ರಾಜ್ಯ

Hassan News: ಅಡವಿಟ್ಟ ಚಿನ್ನ ಅದಲು ಬದಲು; ಮಹಾ ಮೋಸಕ್ಕೆ ಬೆಚ್ಚಿಬಿದ್ದ ಎಸ್​ಬಿಐ ಬ್ಯಾಂಕ್​ ಗ್ರಾಹಕರು,ಆರೋಪಿ ಅಂದರ್​

editor tv by editor tv
June 21, 2023
in ರಾಜ್ಯ
0
Hassan News: ಅಡವಿಟ್ಟ ಚಿನ್ನ ಅದಲು ಬದಲು; ಮಹಾ ಮೋಸಕ್ಕೆ ಬೆಚ್ಚಿಬಿದ್ದ ಎಸ್​ಬಿಐ ಬ್ಯಾಂಕ್​ ಗ್ರಾಹಕರು,ಆರೋಪಿ ಅಂದರ್​
1.9k
VIEWS
Share on FacebookShare on TwitterShare on Whatsapp

ಹಾಸನ: ಅಡವಿಟ್ಟ ಅಸಲಿ ಚಿನ್ನ ಎಗರಿಸಿ ನಕಲಿ ಚಿನ್ನ(Gold)ವನ್ನ ಬ್ಯಾಂಕ್ ಕಪಾಟಿನಲ್ಲಿಟ್ಟು ಮೋಸ, ತಾನು ಮಾಡಿದ ಸಾಲ ತೀರಿಸಲು ಜನರು ಅಡವಿಟ್ಟ ಚಿನ್ನ ಕದ್ದು, ತಲೆ ಮರೆಸಿಕೊಂಡಿದ್ದ, ಈ ಮಧ್ಯೆ ಆತ್ಮಹತ್ಯೆಯ ನಾಟಕದ ವೀಡಿಯೋ ಮಾಡಿ ಕಳ್ಳಾಟ ಆಡಿದವನನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಹೌದು ಬೃಹತ್ ಹಗರಣದ ಜಾಲ ಬೇಧಿಸಲು ಪೊಲೀಸರು ಮುಂದಾಗಿದ್ದರು. ಹಾಸನ(Hassan) ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬೆಳವಾಡಿ ಗ್ರಾಮದ ಎಸ್​ಬಿಐ(SBI) ಶಾಖೆಯಲ್ಲಿ 1 ಕೋಟಿಗೂ ಅದಿಕ ಮೌಲ್ಯದ ಚಿನ್ನವನ್ನ ಎಗರಿಸಿರುವ ಆರೋಪ ಕೇಳಿ ಬಂದಿತ್ತು. ಕಷ್ಟಕ್ಕಾಗಿ ತಮ್ಮಲ್ಲಿರುವ ಚಿನ್ನದ ಆಭರಣವನ್ನ ಅಡವಿಟ್ಟು ಸಾಲ ಪಡೆದಿದ್ದ ಗ್ರಾಹಕರು ತಮ್ಮ ಚಿನ್ನ ಬ್ಯಾಂಕ್​ನಲ್ಲಿ ಭದ್ರವಾಗಿದೆ ಎಂದುಕೊಂಡಿದ್ದರು. ಬ್ಯಾಂಕ್​ನ ಓರ್ವ ಸಿಬ್ಬಂದಿ ಮೇ ತಿಂಗಳಲ್ಲಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಬ್ಯಾಂಕಿನ ಖಜಾನೆಯಲ್ಲಿದ್ದ ಚಿನ್ನದ ಪರಿಶೀಲನೆ ನಡೆಸಿದ ವೇಳೆ ನಡೆದಿರೋ ಭಾರೀ ಗೋಲ್ಮಾಲ್ ಬಯಲಾಗಿದೆ.

ಸಾಲವನ್ನ ತೀರಿಸಲು ಚಿನ್ನವನ್ನ ಕಳ್ಳತನ ಮಾಡಲು ಶುರುಮಾಡಿದ್ದ ಆಸಾಮಿ

2013ರಿಂದ ಇದೇ ಗ್ರಾಮದ ಲವಾ ಬಿ.ಎನ್ ಎಂಬಾತ ಹೊರಗುತ್ತಿಗೆ ಆಧಾರದಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ವರ್ಷ ಕಳೆದಂತೆ ಬ್ಯಾಂಕಿನ ಅಧಿಕಾರಿಗಳ ವಿಶ್ವಾಸ ಕೂಡ ಗಳಿಸಿದ್ದ. ಈತ ಪ್ರಾಮಾಣಿಕ ಎಂದು ನಂಬಿದ ಬ್ಯಾಂಕ್ ಅಧಿಕಾರಿಗಳು ಬ್ಯಾಂಕಿನ ಚಿನ್ನದ ಅಡಮಾನ ವಿಭಾಗದ ಕಡತಗಳು, ಹೊಸ ಖಾತೆ ತೆರೆಯೋ ಪ್ರಕ್ರಿಯೆಯ ಜವಾಬ್ದಾರಿಯನ್ನ ಈತನ ಹೆಗಲಿಗೆ ಹಾಕಿ ಮೈ ಮರೆತ್ತಿದ್ದರು. ಇದನ್ನೆ ಬಂಡವಾಳ ಮಾಡಿಕೊಂಡ ಈ ಖತರ್ನಾಕ್ ತಾನು ಮಾಡಿದ್ದ ಸಾಲ ತೀರಿಸಲು, ಸಾಲದ ಬಡ್ಡಿಕಟ್ಟಲು ಜನರ ಚಿನ್ನವನ್ನ ಒಂದೊಂದಾಗಿ ಎಗರಿಸೋಕೆ ಶುರುಮಾಡಿದ್ದ

ಅಸಲಿ ಚಿನ್ನದ ಬದಲಿಗೆ ನಕಲಿ ಚಿನ್ನ

ಹೌದು ತನಗೆ ಕಷ್ಟ ಆದಾಗ ಬ್ಯಾಂಕ್​ನಲ್ಲಿದ್ದ ಚಿನ್ನ ಎಗರಿಸೋದು, ತಾನು ಎತ್ತಿಕೊಂಡ ತೂಕದಷ್ಟು ಅಸಲಿ ಚಿನ್ನದ ಬದಲಿಗೆ ನಕಲಿ ಚಿನ್ನ ಇಟ್ಟು ಯಾಮಾರಿಸಿದ್ದ. ಆದ್ರೆ, ಯಾವಾಗ ಬ್ಯಾಂಕ್​ನ ಹಿರಿಯ ಅಧಿಕಾರಿಗಳು ಚಿನ್ನದ ಪರಿಶೀಲನೆಗಿಳಿದ್ರೋ ನಡೆದಿರೋ ಮಹಾ ವಂಚನೆ ಬಯಲಾಗಿದೆ. ತನ್ನ ಕಳ್ಳತನದ ವಿಚಾರ ಬಯಲಾಗುತ್ತಲೆ ತಿಂಗಳ ಹಿಂದೆ ಎಸ್ಕೇಪ್ ಆಗಿದ್ದ ಲವಾ ಬಿ.ಎನ್ ವಾರದ ಹಿಂದೆ ಸೆಲ್ಫಿ ವೀಡಿಯೋ ಮಾಡಿ ತಾನು ಮಾಡಿರೋ ಕಳ್ಳತನವನ್ನು ಒಪ್ಪಿಕೊಂಡಿದ್ದಾನೆ. ಸಾಲಗಾರರ ಕಾಟ ಹೆಚ್ಚಾಗಿದ್ದರಿಂದ ಚಿನ್ನ ಕದ್ದೆ ನನ್ನ ಸಾವಿಗೆ ಸಾಲಗಾರರೇ ಕಾರಣ ಎಂದು ಆರೋಪಿಸಿದ್ದನು. ಈ ಕುರಿತು ಜೂನ್ 14ರಂದು ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರೋ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.

ಬೆಳವಾಡಿಯ ಎಸ್.ಬಿ.ಐ ಗ್ರಾಮೀಣ ಶಾಖೆಯಾದ್ದರಿಂದ ಹಳ್ಳಿಯ ರೈತರು ತಮ್ಮ ಜಮೀನು ಕೆಲಸಗಳಿಗಾಗಿ ಒಡವೆಗಳನ್ನ ಅಡಮಾನ ಮಾಡಿ ಸಾಲ ಪಡೆದಿದ್ದಾರೆ. ಕೆಲವರು ಐದಾರು ವರ್ಷಗಳಿಂದಲೂ ಅಡವಿಟ್ಟ ಚಿನ್ನ ಬಿಡಿಸಿಲ್ಲ, ಬಡ್ಡಿಕಟ್ಟಿಕೊಂಡು ಗೋಲ್ಡ್ ಲೋನ್ ನವೀಕರಣ ಮಾಡಿದ್ದಾರೆ. ವಂಚನೆ ಮಾಡಿರೋ ಆರೋಪ ಹೊತ್ತಿರೋ ಲವಾ ಸ್ಥಳೀಯನೆ ಆಗಿದ್ದರಿಂದ ಯಾರು ಬೇಗನೆ ಒಡವೆ ಬಿಡಿಸೋದಿಲ್ಲ ಎನ್ನೋದನ್ನ ಲೆಕ್ಕಾಚಾರ ಹಾಕಿ ಅಂತಹವರ ಚಿನ್ನಕ್ಕೆ ಕನ್ನ ಹಾಕಿದ್ದ. ಬ್ಯಾಂಕ್​ನ ಸೀಕ್ರೇಟ್ ಲಾಕರ್​ನಲ್ಲಿದ್ದ 30 ಚಿನ್ನದ ಕವರ್​ನಲ್ಲಿ 18 ಕವರ್​ಗಳಲ್ಲಿನ ಚಿನ್ನವನ್ನ ಬದಲಾಯಿಸಿ ಅಸಲಿ ಚಿನ್ನದ ಬದಲು ನಕಲಿ ಚಿನ್ನ ಇಟ್ಟಿದ್ದ. ಇದೀಗ ಪ್ರಕರಣ ಬೆಳಕಿಗೆ ಬರುತ್ತಲೆ ಎಸ್ಕೇಪ್ ಆಗಿದ್ದ ಲವಾನನ್ನ ಕರೆದು ವಿಚಾರಣೆ ಮಾಡೋಕೆ ಶತ ಪ್ರಯತ್ನ ಮಾಡಿದ ಬ್ಯಾಂಕ್ ಅಧಿಕಾರಿಗಳು ಕಡೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದೀಗ ಆರೋಪಿ ಸಿಕ್ಕಿಬಿದ್ದಿದ್ದು, ಆತನ ವಿರುದ್ದ ಸೂಕ್ತ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ತಮ್ಮ ಹಣಕಾಸಿನ ಅನಿವಾರ್ಯತೆಗಾಗಿ ಚಿನ್ನ ಅಡವಿಟ್ಟು ಸಾಲ ಮಾಡಿದ್ದ ರೈತರು, ತಮ್ಮ ಚಿನ್ನ ಬ್ಯಾಂಕ್ ನಲ್ಲಿ ಭದ್ರವಾಗಿದೆ ಎಂದು ನೆಮ್ಮದಿಯಾಗಿದ್ದರೆ, ಯಾರಿಗೂ ತಿಳಿಯದಂತೆ ಚಿನ್ನ ಎಗರಿಸಿರೋ ಖತರ್ನಾಕ್, ಚಿನ್ನ ಮಾರಾಟ ಮಾಡಿ ತನ್ನ ಕಷ್ಟ ನೀಗಿಸಿಕೊಳ್ಳೋ ಯತ್ನ ಮಾಡಿದ್ದ. ಆದ್ರೆ, ಚಿನ್ನ ಪರಿಶೀಲನೆ ವೇಳೆ ನಡೆದಿರುವ ಮಹಾ ಮೋಸ ಬಯಲಾಗಿದ್ದು, ಈ ಹಗರಣದ ಹಿಂದೆ ಯಾರಿದ್ದಾರೆ, ಕೇವಲ ತಾನು ಮಾಡಿದ ಸಾಲಕ್ಕಾಗಿ ಇಷ್ಟೆಲ್ಲಾ ಚಿನ್ನ ಎಗರಿಸಿ ಆತ ಮಾರಾಟ ಮಾಡಿಕೊಂಡನಾ? ಎನ್ನೋದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.

Previous Post

ಮಂಗಳೂರು: ಪುತ್ತೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತನಿಂದ ಹಲ್ಲೆ

Next Post

ಕೇಂದ್ರದಿಂದ ಸರ್ವರ್‌ ಹ್ಯಾಕ್‌, ಕರ್ನಾಟಕದ ಯೋಜನೆಗಳಿಗೆ ಅಡ್ಡಿ ಯತ್ನ: ಜಾರಕಿಹೊಳಿ

Next Post
ಕೇಂದ್ರದಿಂದ ಸರ್ವರ್‌ ಹ್ಯಾಕ್‌, ಕರ್ನಾಟಕದ ಯೋಜನೆಗಳಿಗೆ ಅಡ್ಡಿ ಯತ್ನ: ಜಾರಕಿಹೊಳಿ

ಕೇಂದ್ರದಿಂದ ಸರ್ವರ್‌ ಹ್ಯಾಕ್‌, ಕರ್ನಾಟಕದ ಯೋಜನೆಗಳಿಗೆ ಅಡ್ಡಿ ಯತ್ನ: ಜಾರಕಿಹೊಳಿ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.