

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ನಟ ಉಪೇಂದ್ರ ಪ್ರಶ್ನೊಂದು ಎತ್ತಿದ್ದು, ಭಾರೀ ಚರ್ಚೆ ಹುಟ್ಟುಹಾಕಿದೆ.
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಕೊನೆಗೂ ದಿನಾಂಕ ಪ್ರಕಟವಾಗಿದೆ. ಕೇಂದ್ರ ಚುನಾವಣಾ ಆಯೋಗದ (election commission of india) ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಇಂದು(ಮಾರ್ಚ್ 29) ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಚುನಾವಣೆ ದಿನಾಂಕ ಪ್ರಕಟಿಸಿದ್ದು, ಇದೇ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ನಟ ಪ್ರಜಾಕೀಯ ಪಕ್ಷ ಸಂಸ್ಥಾಪಕ ಉಪೇಂದ್ರ(Upendra) ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಯೊಂದನ್ನು ಎತ್ತಿದ್ದು, ಸಂಚಲನ ಮೂಡಿಸಿದೆ. ಅಲ್ಲದೇ ಈ ಪ್ರಶ್ನೆ ಮೂಲಕ ಉಪ್ಪಿ ಸಾರ್ವಜನಿಕರ ತಲೆಗೆ ಹುಳಬಿಟ್ಟಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಉಪೇಂದ್ರ ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತದೆ. ಮೇ 13 ಶನಿವಾರದಂದು ಫಲಿತಾಂಶ ಪ್ರಕಟವಾಗುತ್ತಿದೆ. ಮತ ಎಣಿಕೆಗೆ ಎರಡು ದಿನ ಬೇಕೆ? ಬಲ್ಲವರು ತಿಳಿಸುತ್ತೀರಾ? ಎಂದು ಟ್ವೀಟ್ ಮಾಡಿದ್ದಾರೆ. ಉಪೇಂದ್ರ ಅವರು ಹೀಗೆ ಯಾಕೆ ಕೇಳಿದ್ದಾರೆ? ಅವರ ತಲೆಯಲ್ಲಿ ಹೇಗೆ ಬಂತು? ಇದರ ಹಿಂದಿನ ಮರ್ಮವೇನು? ಉಪೇಂದ್ರ ಅವರಿಗೆ ಚುನಾವಣೆ ವ್ಯವಸ್ಥೆ ಮೇಲೆಯೇ ಅನುಮಾನ ಬಂತಾ? ಹೀಗೆ ನಾನಾ ಆಯಾಮಗಳಲ್ಲಿ ಸಾರ್ವಜನಕರಿಲ್ಲಿ ಪ್ರಶ್ನೆಗಳ ಜೊತಗೆ ಚರ್ಚೆಗಳು ಸಹ ಶುರುವಾಗಿವೆ

ಸದ್ಯ ಉಪೇಂದ್ರ ಅವರು ಟ್ವಿಟರ್ನಲ್ಲಿ ವ್ಯಕ್ತಪಡಿಸಿರುವ ಗೊಂದಲದ ಬಗ್ಗೆ ಅನೇಕರು ಕಮೆಂಟ್ ಮೂಲಕ ಉತ್ತರಿಸುತ್ತಿದ್ದಾರೆ. ಉಪೇಂದ್ರ ಅವರೇ, ಚುನಾವಣೆ ಆದ ದಿನವೇ ಮತ ಎಣಿಕೆ ಮಾಡಲು ಹೇಗೆ ಸಾಧ್ಯ? ಹಳ್ಳಿ ಹಳ್ಳಿಗಳಿಂದ ಮತ ಪೆಟ್ಟಿಗೆ ಸುರಕ್ಷಿತವಾಗಿ ಕೊಂಡೊಯ್ದು, ನೋಂದಾಯಿತ ಮತ ಎಣಿಕೆ ಕೇಂದ್ರಕ್ಕೆ ತಲುಪಬೇಕು. ಇದಕ್ಕೆ ಸಮಯ ಬೇಕಲ್ಲವೇ? ಮತ ಎಣಿಕೆ ಶುರುವಾಗುವುದು 13ನೇ ತಾರೀಖಿನಂದು. 11,12ನೇ ತಾರೀಖಿನಂದು ಅಲ್ಲ ಎಂದಿದ್ದಾರೆ.

ಮತ್ತೋರ್ವ ಕಮೆಂಟ್ ಮಾಡಿದ್ದು, ನಿಮ್ಮ ಸಿನಿಮಾ ಶೂಟಿಂಗ್ ಮುಗಿದ ದಿನವೇ release ಮಾಡ್ತೀರಾ? ಏಕೆಂದು ತಿಳಿಸುವಿರಾ ಸ್ವಾಮಿ? ಎಂದು ಪ್ರಶ್ನಿಸಿದ್ದರೆ, ಇನ್ನೋರ್ವ ಗೋಲ್ ಮಾಲ್ ಮಾಡುವುದಕ್ಕೆ ಟೈಮ್ ಬೇಕ ಅಲ್ವಾ ಅದಕ್ಕೆ ಎಂದಿದ್ದಾರೆ. ಇನ್ನು ವ್ಯವಸ್ಥೆ ಮೇಲೆನೇ ನಿಮಗೆ ಅನುಮಾನವೇ ಸರ್ ಎಂದು ಪ್ರಶ್ನಿಸಿದ್ದಾರೆ. ಉಪೇಂದ್ರ ಅವರೇ, ಎಲೆಕ್ಷನ್ ಕಣ್ರೀ ಇದು, ಯಾವ್ದೋ ಆನ್ಲೈನ್ exam ಅಲ್ಲ, ಆಗಿದ ತಕ್ಷಣ ರಿಸಲ್ಟ್ ಕೊಡೋಕೆ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
