

ಶಿವಮೊಗ್ಗ: ಡಿಸಿ ಕಚೇರಿ ಆವರಣದ ಮೆಟ್ಟಿಲು ಮೇಲೆ ಆಜಾನ್ ಕೂಗಿದ ವಿಚಾರವನ್ನು ಖಂಡಿಸಿ ಶಿವಮೊಗ್ಗದಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟಿಸಿದ್ದು, ಗೋಮೂತ್ರ ಹಾಕಿ ಸ್ಥಳವನ್ನು ಶುದ್ದೀಕರಿಸಲು ಯತ್ನಿಸಿದಾಗ ಪೊಲೀಸರು ತಡೆ ಹಿಡಿದ ಘಟನೆ ನಡೆದಿದೆ

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಪ್ರತಿಭಟಿಸಿದ್ದಾರೆ. ಮುಸಲ್ಮಾನರು ಮತಾಂಧತೆ ಹರಡುತ್ತಿದ್ದಾರೆಂದು, ಗೂಂಡಾ ಮುಸಲ್ಮಾನರು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ,ಸಂವಿಧಾನ ವಿರೋಧಿ ಎಸ್.ಡಿ.ಪಿ.ಐ. ನಾಯಿಗಳಿಗೆ ದಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ.

ಈ ವೇಳೆ ಗೋಮೂತ್ರ ಸಿಂಪಡಣೆಗೆ ಮುಂದಾದ ಬಜರಂಗದಳ ಕಾರ್ಯಕರ್ತರು. ಡಿಸಿ ಕಚೇರಿ ಮುಂಭಾಗ ಗೋಮೂತ್ರ ಸಿಂಪಡಿಸಲು ಮುಂದಾದ ಕಾರ್ಯಕರ್ತರು. ಇದೇ ವೇಳೆ ಕಸಿದುಕೊಂಡ ಪೊಲೀಸರು ಗೋಮೂತ್ರದ ಬಾಟಲಿಯನ್ನು ಕಸಿದುಕೊಂಡಿದ್ದಾರೆ.
