Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಪ್ಯಾಲೆಸ್ತೀನ್ ಪರ ವಿಶ್ವ ಸಂಸ್ಥೆ ನಿರ್ಣಯ: ಭಾರತ ಸೇರಿದಂತೆ 142 ರಾಷ್ಟ್ರಗಳ ಬೆಂಬಲ

    ಪ್ಯಾಲೆಸ್ತೀನ್ ಪರ ವಿಶ್ವ ಸಂಸ್ಥೆ ನಿರ್ಣಯ: ಭಾರತ ಸೇರಿದಂತೆ 142 ರಾಷ್ಟ್ರಗಳ ಬೆಂಬಲ

    ಹಾಸನ ಟ್ರಕ್ ಹರಿದು ದುರಂತ: ಸಾವಿನ ಸಂಖ್ಯೆ ಹತ್ತಕ್ಕೆ ಏರಿಕೆ, ಹಿಮ್ಸ್ ಆಸ್ಪತ್ರೆಯಲ್ಲಿ ಚಂದನ್ ಸಾವು

    ಮಂಗಳೂರು: ನಕಲಿ ಆಧಾರ್ ಕಾರ್ಡ್ ಹಾಗೂ ಪಹಣಿ ಪತ್ರಗಳನ್ನು ತಯಾರಿಸಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಜಾಮೀನು ಕೊಡಿಸುತ್ತಿದ್ದ ಗ್ಯಾಂಗ್ ಬಂಧನ

    ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಬ್ಯುರೋಕ್ರಸಿಯ ಅಟ್ಟಹಾಸ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ’:ಬಂಟ್ವಾಳ SDPI ನಾಯಕರ ಸಭೆಯಲ್ಲಿ ರಿಯಾಝ್ ಕಡಂಬು

    ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಬ್ಯುರೋಕ್ರಸಿಯ ಅಟ್ಟಹಾಸ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ’:ಬಂಟ್ವಾಳ SDPI ನಾಯಕರ ಸಭೆಯಲ್ಲಿ ರಿಯಾಝ್ ಕಡಂಬು

    ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಸಾವಿನ ಸಂಖ್ಯೆ 9ಕ್ಕೆ ಏರಿಕೆ

    ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್   ಹಾಕಿದ ಮಹೇಶ್ ವಿಕ್ರಂ ಹೆಗ್ಡೆ; ಕೇಸ್ ಹಾಕಿ ಜೈಲಿಗಟ್ಟಿದ ಸರ್ಕಾರ!

    ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಮಹೇಶ್ ವಿಕ್ರಂ ಹೆಗ್ಡೆ; ಕೇಸ್ ಹಾಕಿ ಜೈಲಿಗಟ್ಟಿದ ಸರ್ಕಾರ!

    ಹಾಸನ| ಗಣಪತಿ ಮೆರವಣಿಗೆ ವೇಳೆ ಭೀಕರ ದುರಂತ – ಟ್ರಕ್‌ ಹರಿದು 6 ಮಂದಿ ಸ್ಥಳದಲ್ಲೇ ಸಾವು

    ಹಾಸನ| ಗಣಪತಿ ಮೆರವಣಿಗೆ ವೇಳೆ ಭೀಕರ ದುರಂತ – ಟ್ರಕ್‌ ಹರಿದು 6 ಮಂದಿ ಸ್ಥಳದಲ್ಲೇ ಸಾವು

    ಉಡುಪಿ :ಪ್ರೇಯಸಿಯನ್ನು ಕೊಂದು ಪರಾರಿಯಾಗಿದ್ದ ಪ್ರಿಯಕರ ಶವವಾಗಿ ಪತ್ತೆ, ಹುಟ್ಟುಹಬ್ಬದಂದೇ ಯುವತಿ ದುರಂತ ಅಂತ್ಯ

    4 ಶಂಕಾಸ್ಪದ ಸಾವುಗಳ ತನಿಖೆಗೆ ತಿಮರೋಡಿ ದೂರು, ವಿಠಲಗೌಡ ಆರೋಪವನ್ನು ಎಸ್‌ಐಟಿ ಪರಿಶೀಲಿಸಿ ಕ್ರಮ: ಪರಮೇಶ್ವರ್

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಪ್ಯಾಲೆಸ್ತೀನ್ ಪರ ವಿಶ್ವ ಸಂಸ್ಥೆ ನಿರ್ಣಯ: ಭಾರತ ಸೇರಿದಂತೆ 142 ರಾಷ್ಟ್ರಗಳ ಬೆಂಬಲ

    ಪ್ಯಾಲೆಸ್ತೀನ್ ಪರ ವಿಶ್ವ ಸಂಸ್ಥೆ ನಿರ್ಣಯ: ಭಾರತ ಸೇರಿದಂತೆ 142 ರಾಷ್ಟ್ರಗಳ ಬೆಂಬಲ

    ಹಾಸನ ಟ್ರಕ್ ಹರಿದು ದುರಂತ: ಸಾವಿನ ಸಂಖ್ಯೆ ಹತ್ತಕ್ಕೆ ಏರಿಕೆ, ಹಿಮ್ಸ್ ಆಸ್ಪತ್ರೆಯಲ್ಲಿ ಚಂದನ್ ಸಾವು

    ಮಂಗಳೂರು: ನಕಲಿ ಆಧಾರ್ ಕಾರ್ಡ್ ಹಾಗೂ ಪಹಣಿ ಪತ್ರಗಳನ್ನು ತಯಾರಿಸಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಜಾಮೀನು ಕೊಡಿಸುತ್ತಿದ್ದ ಗ್ಯಾಂಗ್ ಬಂಧನ

    ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಬ್ಯುರೋಕ್ರಸಿಯ ಅಟ್ಟಹಾಸ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ’:ಬಂಟ್ವಾಳ SDPI ನಾಯಕರ ಸಭೆಯಲ್ಲಿ ರಿಯಾಝ್ ಕಡಂಬು

    ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಬ್ಯುರೋಕ್ರಸಿಯ ಅಟ್ಟಹಾಸ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ’:ಬಂಟ್ವಾಳ SDPI ನಾಯಕರ ಸಭೆಯಲ್ಲಿ ರಿಯಾಝ್ ಕಡಂಬು

    ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಸಾವಿನ ಸಂಖ್ಯೆ 9ಕ್ಕೆ ಏರಿಕೆ

    ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್   ಹಾಕಿದ ಮಹೇಶ್ ವಿಕ್ರಂ ಹೆಗ್ಡೆ; ಕೇಸ್ ಹಾಕಿ ಜೈಲಿಗಟ್ಟಿದ ಸರ್ಕಾರ!

    ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಮಹೇಶ್ ವಿಕ್ರಂ ಹೆಗ್ಡೆ; ಕೇಸ್ ಹಾಕಿ ಜೈಲಿಗಟ್ಟಿದ ಸರ್ಕಾರ!

    ಹಾಸನ| ಗಣಪತಿ ಮೆರವಣಿಗೆ ವೇಳೆ ಭೀಕರ ದುರಂತ – ಟ್ರಕ್‌ ಹರಿದು 6 ಮಂದಿ ಸ್ಥಳದಲ್ಲೇ ಸಾವು

    ಹಾಸನ| ಗಣಪತಿ ಮೆರವಣಿಗೆ ವೇಳೆ ಭೀಕರ ದುರಂತ – ಟ್ರಕ್‌ ಹರಿದು 6 ಮಂದಿ ಸ್ಥಳದಲ್ಲೇ ಸಾವು

    ಉಡುಪಿ :ಪ್ರೇಯಸಿಯನ್ನು ಕೊಂದು ಪರಾರಿಯಾಗಿದ್ದ ಪ್ರಿಯಕರ ಶವವಾಗಿ ಪತ್ತೆ, ಹುಟ್ಟುಹಬ್ಬದಂದೇ ಯುವತಿ ದುರಂತ ಅಂತ್ಯ

    4 ಶಂಕಾಸ್ಪದ ಸಾವುಗಳ ತನಿಖೆಗೆ ತಿಮರೋಡಿ ದೂರು, ವಿಠಲಗೌಡ ಆರೋಪವನ್ನು ಎಸ್‌ಐಟಿ ಪರಿಶೀಲಿಸಿ ಕ್ರಮ: ಪರಮೇಶ್ವರ್

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
No Result
View All Result
Home ಸುದ್ದಿ

ನೇಪಾಳ ಬಳಿಕ ಪ್ಯಾರಿಸ್‌ ಧಗಧಗ.. ಇಲ್ಲೆಲ್ಲ ಏನು ಆಗ್ತಿದೆ..?

editor tv by editor tv
September 11, 2025
in ಸುದ್ದಿ
0
1.9k
VIEWS
Share on FacebookShare on TwitterShare on Whatsapp

ಪ್ರೇಮಿಗಳ ಸ್ವರ್ಗ ಅಂತಾನೇ ಕರೆಯಲ್ಪಡುವ ಪ್ಯಾರಿಸ್‌ ಅದಕ್ಕೆ ತದ್ವಿರುದ್ಧ ಪರಿಸ್ಥಿಯಲ್ಲಿ ಬೇಯುತ್ತಿದೆ. ಇತ್ತ ನೇಪಾಳ ಬೆನ್ನಲ್ಲೇ ಅತ್ತ ಫ್ರಾನ್ಸ್​ನಲ್ಲೂ ಸರ್ಕಾರದ ವಿರುದ್ಧ ಧಂಗೆ ಶುರುವಾಗಿದೆ. ಉದ್ರಿಕ್ತರು ಬೀದಿಗಿಳಿದು ವಾಹನಗಳಿಗೆ ಬೆಂಕಿ ಹಚ್ಚಿ ಕ್ರೌರ್ಯದ ದಾರಿ ಹಿಡಿದಿದ್ದಾರೆ.

11 Sep 2025

Paris

ಪ್ಯಾರಿಸ್​​ನಲ್ಲಿ ಬೃಹತ್ ಪ್ರತಿಭಟನೆ

  • ಬಜೆಟ್ ಕಡಿತದಂತ ಯೋಜನೆ, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ
  • 2 ಸರ್ಕಾರಿ ರಜೆ ರದ್ದುಗೊಳಿಸಿದ್ದಕ್ಕೆ ತೀವ್ರ ಟೀಕೆಗೆ ಒಳಗಾಗಿ ಅಧಿಕಾರಕ್ಕೆ ಕೊಕ್ಕೆ
  • ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಲೆಕೋರ್ನುರನ್ನು ನೂತನ ಪ್ರಧಾನಿಯಾಗಿ ನೇಮಕ

ನೇಪಾಳದಲ್ಲಿ ಹಿಂಸಾಚಾರದ ಕಾವು ಇನ್ನೂ ಕಡಿಮೆಯಾಗಿಲ್ಲ. ಹಿಮಾಲಯ ಬೀಡು ಇನ್ನೂ ಧಗಧಗ ಅಂತಿದೆ. ಈ ಬೆನ್ನಲ್ಲೇ ಫ್ರೆಂಚ್ ರಾಜಧಾನಿ ಪ್ಯಾರಿಸ್ ಹೊತ್ತಿ ಉರಿಯುತ್ತಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಸರ್ಕಾರದ ವಿರುದ್ಧ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ಭುಗಿಲೆದ್ದಿವೆ. ಸುಂದರ ಪ್ಯಾರಿಸ್‌ ಹಿಂಸಾಚಾರದಲ್ಲಿ ಧಗಧಗಿಸುತ್ತಿದೆ. ಬ್ಲಾಕ್ ಎವೆರಿಥಿಂಗ್ ಅಂದ್ರೆ ಎಲ್ಲವನ್ನೂ ತಡೆಯಿರಿ ಅನ್ನೋ ಆಂದೋಲನವು ಅಕ್ಷರಶಃ ಹಿಂಸಾಚಾರಕ್ಕೆ ತಿರುಗಿದೆ.

ಬ್ಲಾಕ್ ಎವೆರಿಥಿಂಗ್ ಆಂದೋಲನ 

ಬ್ಲಾಕ್ ಎವೆರಿಥಿಂಗ್ ಆಂದೋಲನ ಮೂಲಕ ಹೆಚ್ಚಿನ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ. ರಾಜಧಾನಿ ಪ್ಯಾರಿಸ್ ಸೇರಿದಂತೆ ಹಲವು ನಗರಗಳ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಬೆಂಕಿ ಹಚ್ಚಿದ್ದು ಎಲ್ಲೆಲ್ಲೂ ಅಗ್ನಿ ಧಗಧಗಿಸುತ್ತಿದೆ. ರಸ್ತೆಗಳನ್ನು ತಡೆದು, ವಾಹನಗಳಿಗೆ ಬೆಂಕಿ ಹಚ್ಚಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ತಡೆಯಲು ಯತ್ನಿಸಿದ ಪೊಲೀಸರ ಜೊತೆಗೂ ವಾಗ್ವಾದಕ್ಕಿಳಿದು ಮಾರಾಮಾರಿ ನಡೆಸಿದ್ದಾರೆ. ಪ್ರತಿಭಟನೆ ನಡೆಸಿದ 300ಕ್ಕೂ ಅಧಿಕ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರತಿಭಟನಾಕಾರರು ಪ್ಯಾರಿಸ್‌ನ ಬೀದಿಗಳನ್ನು ಮುಚ್ಚಿದ್ದು ಅನೇಕ ಸ್ಥಳಗಳಲ್ಲಿ ಬೆಂಕಿ ಹಚ್ಚಲು ಪ್ರಾರಂಭಿಸಿದ್ದಾರೆ. 80 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಅಖಾಡಕ್ಕೆ ಇಳಿಸಲಾಗಿದ್ದು ಬ್ಯಾರಿಕೇಡ್‌ಗಳನ್ನು ಮುರಿದ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ರೆನ್ನೆಸ್‌ನ ಪಶ್ಚಿಮ ಭಾಗದಲ್ಲಿ ಬಸ್‌ಗೆ ಬೆಂಕಿ ಹಚ್ಚಿದರಿಂದ ಸ್ಥಳೀಯವಾಗಿ ವಿದ್ಯುತ್ ಕಡಿತಗೊಂಡು ರೈಲುಗಳೂ ಕೂಡ ಬಹುತೇಕ ಸ್ತಬ್ದವಾಗಿವೆ. 

ಪ್ಯಾರಿಸ್​ ಹಿಂಸಾಚಾರ!

ಸರ್ಕಾರದ ಬಜೆಟ್ ಕಡಿತದಂತ ಯೋಜನೆಗಳು ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಂತಹ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ಯಾರಿಸ್‌ನಲ್ಲಿ ಬೆಂಕಿ ಹಚ್ಚುವುದಕ್ಕೂ ಮೊದಲು, ಎಲ್ಲವನ್ನೂ ನಿರ್ಬಂಧಿಸಿ ಆಂದೋಲನವನ್ನು ಸಾಮಾಜಿಕ ಮಾಧ್ಯಮದಲ್ಲಿ ಶುರುಮಾಡಲಾಯ್ತು. ಫ್ರೆಂಚ್ ಪ್ರಧಾನಿ ಬೇರೂ ತಮ್ಮ ಬಜೆಟ್‌ನಲ್ಲಿ 44 ಬಿಲಿಯನ್ ಯುರೋ ಅಂದ್ರೆ ಸುಮಾರು 4 ಲಕ್ಷ ಕೋಟಿ ರೂಪಾಯಿಯನ್ನು ಉಳಿಸುವ ಯೋಜನೆ ಮಂಡಿಸಿದ್ದರು.

ಜೊತೆಗೆ 2 ಸರ್ಕಾರಿ ರಜೆಗಳನ್ನು ರದ್ದುಗೊಳಿಸಿದ್ದರು. ಈ ನಡೆ ತೀವ್ರ ಟೀಕೆಗೆ ಒಳಗಾಗಿದ್ದು ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು. ಮಾತ್ರವಲ್ಲದೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ರಕ್ಷಣಾ ಸಚಿವ ಲೆಕೋರ್ನುರನ್ನು ನೂತನ ಪ್ರಧಾನಿಯಾಗಿ ನೇಮಿಸಿದರು. ಇಷ್ಟಾದ್ರೂ ಪ್ರತಿಭಟನೆಗಳು ತೀವ್ರಗೊಂಡಿವೆ.
ಒಟ್ಟಾರೆ ಕೆಲವೇ ತಿಂಗಳಲ್ಲೇ ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್, ನಾಲ್ವರು ಪ್ರಧಾನಿಗಳನ್ನ ಬದಲಾಯಿಸಿ 5ನೇ ಪ್ರಧಾನಿಯಾಗಿ ಲೆಕೋರ್ನುರನ್ನು ನೇಮಿಸಿದ್ದಾರೆ. ಕೆಲ ಯೋಜನೆಗಳನ್ನು ಬಲಪಡಿಸಿದ್ದಕ್ಕೆ ಜನರು ರೊಚ್ಚಿಗೆದ್ದಿದ್ದಾರೆ. ಸದ್ಯ ಪ್ರಧಾನಿ ಬದಲಾದ ಮೇಲಾದ್ರೂ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆಯುತ್ತಾರಾ ಕಾದು ನೋಡಬೇಕಿದೆ.

Previous Post

ಸಾಹಸಸಿಂಹ ವಿಷ್ಣುವರ್ಧನ್‌, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ

Next Post

Umar Khalid Bail Plea ಜಾಮೀನು ನಿರಾಕರಣೆ ಪ್ರಶ್ನಿಸಿ ಉಮರ್ ಖಾಲಿದ್ ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿ ಭವಿಷ್ಯ ಸೆ.12ಕ್ಕೆ

Next Post

Umar Khalid Bail Plea ಜಾಮೀನು ನಿರಾಕರಣೆ ಪ್ರಶ್ನಿಸಿ ಉಮರ್ ಖಾಲಿದ್ ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿ ಭವಿಷ್ಯ ಸೆ.12ಕ್ಕೆ

Leave a Reply Cancel reply

Your email address will not be published. Required fields are marked *

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.