ಬಂಟ್ವಾಳ :ಮುಹಿಯ್ಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 85 ಶೇಕಡಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜಮಾತ್ ಅಧ್ಯಕ್ಷರಾದ ಹಾಜಿ ಮುಹಮ್ಮದ್ ಅದ್ದೇಡಿ ಅವರ ಅಧ್ಯಕ್ಷತೆಯಲ್ಲಿ ಮುಹಿಯ್ಯುದ್ದೀನ್ ಸಭಾಭವನ ಮಿತ್ತಬೈ ಲ್ ನಲ್ಲಿ ಇತ್ತೀಚಿಗೆ ನಡೆಯಿತು.ಜಮಾತ್ ಖತೀ ಬರಾದ ಕೆ. ಎಂ,ಅಬ್ಬಾಸ್ ಫೈಝಿ ಪುತ್ತಿಗೆ ಕಾರ್ಯಕ್ರಮ ಉದ್ಘಾಟಿಸಿದರು
ಮುದರ್ರಿಸ್ಉಮರ್ ಫಾರೂಕ್ ಫೈಝಿ ಪೈವಳಿಕೆ ದುವಾನೆರವೇರಿಸಿದರು.
ವಿದ್ಯಾರ್ಥಿಗಳಿಗೆ ಪ್ರೇರಣಾ ತರಬೇತಿಯನ್ನು ಉಪನ್ಯಾಸಕರು ಹಾಗೂ ತರಬೇತುದಾರರಾದ ಅಬ್ದುಲ್ ರಝಕ್ ಅನಂತಾಡಿ ನಡೆಸಿಕೊಟ್ಟರು,ಇದೇ ಸಂದರ್ಭದಲ್ಲಿ ಮಿತ್ತಬೈಲ್ ಮಸೀದಿಯ ಲೋಗೋ ಅನಾವರಣ ಗೊಳಿಸಲಾಯಿತು.
ಉಮ್ರಾ ಯಾತ್ರೆ ಕೈಗೊಳ್ಳು ತ್ತಿರುವ ಜಮಾತ್ ಜೊತೆ ಕಾರ್ಯದರ್ಶಿ ಮುಹಮ್ಮದ್ ಶಾಕಿರ್ ಶಾಂತಿ ಅಂಗಡಿ,ಮುದರ್ರಿಸ್ ಉಮರ್ ಫಾರೂಕ್ ಫೈಝಿ ಹಾಗು ಇರ್ಷಾದ್ ಹುಸೈನ್ ದಾರಿಮಿ ಅವರನ್ನು ಶುಭ ಹಾರೈಸಿ ಬೀಳ್ಕೊಡುಗೆ ಮಾಡಲಾಯ್ತು.
ವೇದಿಕೆಯಲ್ಲಿ ಬಂಟ್ವಾಳ ಪುರಸಭಾ ಸದಸ್ಯರಾದ ಮೊಹಮ್ಮದ್ ಶರೀಫ್, ಹಸೈನಾರ್ ,SKSSF ಬಂಟ್ವಾಳ ವಲಯ ಅಧ್ಯಕ್ಷರಾದ ಇರ್ಷಾದ್ ಹುಸೈನ್ ದಾರಿಮಿ, ಮಿತ್ತಬೈಲ್ ಜಮಾತ್ ಕಾನೂನು ಸಲಹೆಗಾರರಾದ ಅಡ್ವಕೇಟ್ ಹಬೀಬ್ ರಹ್ಮಾನ್, ಜಮಾತ್ ಉಪಾಧ್ಯಕ್ಷರಾದ ಫಲುಲ್ ತಂಗಳ್, ಕೋಶಾಧಿಕಾರಿ ಅಬ್ದುಲ್ ರಹ್ಮಾನ್ ಮಾಜಿ ಅಧ್ಯಕ್ಷರಾದ ಸಾಗರ್ ಮುಹಮ್ಮದ್, ಕಮಿಟಿ ಸದಸ್ಯರು ಹಾಗು ಜಮಾಅತಿನ ವ್ಯಾಪ್ತಿಯ ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಸ್ವಾಗತಿಸಿ,ಕಾರ್ಯದರ್ಶಿ ಅಶ್ರಫ್ ಧನ್ಯವಾದಗೈದು, ಖಲೀಲ್ ವಾಫಿ ಉಸ್ತಾದ್ ಕಾರ್ಯಕ್ರಮ ನಿರೂಪಣೆ ಮಾಡಿದರು.