Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಬಂಟ್ವಾಳ : ತಲ್ವಾರ್ ದಾಳಿ  ಸುಳ್ಳೆಂದು ಆರೋಪಿಸಿ ಬಂಧಿತನಾಗಿದ್ದ ಉಮ್ಮರ್ ಫಾರೂಕ್ ಸಜಿಪರವರಿಗೆ ಜಾಮೀನು ಮಂಜೂರು

    ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

    ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಬಂಟ್ವಾಳ : ತಲ್ವಾರ್ ದಾಳಿ  ಸುಳ್ಳೆಂದು ಆರೋಪಿಸಿ ಬಂಧಿತನಾಗಿದ್ದ ಉಮ್ಮರ್ ಫಾರೂಕ್ ಸಜಿಪರವರಿಗೆ ಜಾಮೀನು ಮಂಜೂರು

    ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

    ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
No Result
View All Result
Home ಸುದ್ದಿ ರಾಜ್ಯ

ವಿದ್ಯುತ್ ಕೂಡ ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್: ಡಿಜಿಟಲ್ ಮೀಟರ್​ಗೆ ಹಣ ಭರಿಸಿದ್ರೆ ಮಾತ್ರ ವಿದ್ಯುತ್ ಪೂರೈಕೆ! – ELECTRICITY IS PREPAID POSTPAID

editor tv by editor tv
March 6, 2025
in ರಾಜ್ಯ
0
ವಿದ್ಯುತ್ ಕೂಡ ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್: ಡಿಜಿಟಲ್ ಮೀಟರ್​ಗೆ ಹಣ ಭರಿಸಿದ್ರೆ ಮಾತ್ರ ವಿದ್ಯುತ್ ಪೂರೈಕೆ! – ELECTRICITY IS PREPAID POSTPAID
1.9k
VIEWS
Share on FacebookShare on TwitterShare on Whatsapp

ಮೊಬೈಲ್​ಗೆ ಯಾವ ರೀತಿ ಹಣ ಭರಿಸುತ್ತೇವೋ ಅದೇ ರೀತಿ ವಿದ್ಯುತ್ ಕೂಡ ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್ ಮಾದರಿಯಲ್ಲಿ ಹಣ ಭರಿಸಿದ್ರೆ ಮಾತ್ರ ವಿದ್ಯುತ್ ಪೂರೈಕೆ ಆಗುತ್ತದೆ.

ದಾವಣಗೆರೆ: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಸೇರಿದಂತೆ ಆಯಾಯ ವಿದ್ಯುತ್ ಕಂಪನಿಗಳು ಇದೀಗ ಹೊಸ ಡಿಜಿಟಲ್ ವಿದ್ಯುತ್ ಮೀಟರ್ ಜಾರಿ ಮಾಡಲು ಮುಂದಾಗಿವೆ. ಈ ಮೀಟರ್ ಹಳೇ ಮೀಟರ್​ಗಿಂತ ಸ್ವಲ್ಪ ಡಿಫರೆಂಟ್ ಎಂಬಂತೆ ಹಣ ಭರಿಸಿದ್ರೆ ಮಾತ್ರ ಜನರಿಗೆ ವಿದ್ಯುತ್ ಲಭ್ಯವಾಗಲಿದೆ.

ಮೊಬೈಲ್​ಗೆ ಯಾವ ರೀತಿ ಹಣ ಭರಿಸುತ್ತೇವೋ ಅದೇ ರೀತಿ ವಿದ್ಯುತ್ ಕೂಡ ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್ ಮಾದರಿಯಲ್ಲಿ ಹಣ ಭರಿಸಿದ್ರೆ ಮಾತ್ರ ವಿದ್ಯುತ್ ಪೂರೈಕೆ ಆಗಲಿದೆ. ಈಗಾಗಲೇ ಡಿಜಿಟಲ್ ಮೀಟರ್​ಗಳು ದಾವಣಗೆರೆ ಬೆಸ್ಕಾಂ ಅಧಿಕಾರಿಗಳ ಕೈಸೇರಿವೆ.

ಹೌದು, ರಾಜ್ಯದ ಎಲ್ಲಾ ಎಸ್ಕಾಂಗಳಲ್ಲಿ ಯಾವುದೇ ಹೊಸ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಬಂದರೂ ಸ್ಮಾರ್ಟ್ ಮೀಟರ್ ಕಡ್ಡಾಯವಾಗಿ ಅಳವಡಿಸಬೇಕು ಎಂಬ ಕೆಇಆರ್‌ಸಿಯ ಸೂಚನೆ ಬಂದಿದೆ. ಹಾಲಿ ಇರುವ ಹಳೆಯ ಮೀಟರ್ ತೆಗೆದು ಸ್ಮಾರ್ಟ್ ಮೀಟರ್ ಅಳವಡಿಸಲು ಹಂತ ಹಂತವಾಗಿ ದಾವಣಗೆರೆ ಬೆಸ್ಕಾಂ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಆದರೆ, ಸ್ಮಾರ್ಟ್ ಮೀಟರ್ ಅಳವಡಿಕೆ ಬಗ್ಗೆ ಬಡ ಜನರು ಕೊಂಚ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.‌ ನಗರ ಪ್ರದೇಶಗಳಲ್ಲಿ ಫೆ.15ರಿಂದ ಸ್ಮಾರ್ಟ್ ಮೀಟರ್ ಅಳವಡಿಕೆ ಆರಂಭ ಆಗಿದ್ದು, ಇಲ್ಲಿತನಕ ದಾವಣಗೆರೆಯಲ್ಲಿ ಯಾವೊಬ್ಬರೂ ಡಿಜಿಟಲ್ ಮೀಟರ್ ಅಳವಡಿಸಲು ಮುಂದಾಗಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದರು.

ಸ್ಮಾರ್ಟ್ ಮೀಟರ್ ದರ ಹೇಗಿದೆ?: ಸ್ಮಾರ್ಟ್ ಮೀಟರ್‌ಗಳ ಬೆಲೆ ದುಬಾರಿ ಇದೆ. ಸಿಂಗಲ್ ಫೇಸ್ ಮೀಟರ್ ಬೆಲೆ 4,998 ರೂ., ಮೂರು ಫೇಸ್ ಮೀಟರ್ ಬೆಲೆ 8870 ರೂ. ಹಾಗು ಎಲ್‌ಟಿ ಸಿಟಿ ಮೂರು ಫೇಸ್ ಮೀಟರ್ ಬೆಲೆ 28,080 ರೂ. ಇರಲಿದೆ. 100 ರೂ.ನಿಂದ ಆರಂಭ ಆಗುವ ಮೀಟರ್‌ಗಳ ಬೆಲೆ 5 ಸಾವಿರ ರೂ. ವರೆಗೆ ಇರುತ್ತದೆ‌ ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಪ್ಪೇಸ್ವಾಮಿ ಮಾಹಿತಿ ನೀಡಿದರು.

ಹಣ ಭರಿಸಿದ್ರೇ ಮಾತ್ರ ವಿದ್ಯುತ್, ಹಣ ಇಲ್ಲದಿದ್ರೇ ವಿದ್ಯುತ್ ಕಡಿತ: ಹೊಸ ಮೀಟ‌ರ್ ಅಳವಡಿಕೆ ಬಳಿಕ ನಿಮಗೆ ಎಷ್ಟು ಯುನಿಟ್ ವಿದ್ಯುತ್ ಬೇಕೆಂಬುದರ ಆಧಾರದಲ್ಲಿ ಸ್ಮಾರ್ಟ್ ಮೀಟರ್ ಚಾರ್ಜ್ ಮಾಡಿಸಿಕೊಳ್ಳಬೇಕು. ನೀವು ಹಾಕಿಕೊಂಡ ಕರೆನ್ಸಿ ಆಧಾರದಲ್ಲಿ ವಿದ್ಯುತ್ ಪೂರೈಕೆ ಆಗಲಿದೆ. ಇನ್ನು ಪೋಸ್ಟ್ ಪೇಯ್ಡ್ ವಿಷಯ ಬಂದರೆ ತಿಂಗಳುಪೂರ್ತಿ ನೀವು ಬಳಸಿದ ಯುನಿಟ್ ಆಧಾರದಲ್ಲಿ ಬಿಲ್ ಬರಲಿದೆ. ಬಿಲ್ ಬಂದ 7 ದಿನದ ಒಳಗೆ ಹಣ ಪಾವತಿ ಮಾಡಬೇಕು. ನಿಗದಿತ ಅವಧಿಯಲ್ಲಿ ಬಿಲ್ ಪಾವತಿ ಆಗದೇ ಇದ್ದರೆ ಸ್ಮಾರ್ಟ್ ಮೀಟರ್ ವಿದ್ಯುತ್ ಪೂರೈಕೆ ನಿಲ್ಲಿಸುತ್ತದೆ.

ಖಾಸಗಿ ಸಭೆ ಸಮಾರಂಭಗಳಿಗೆ ವಿದ್ಯುತ್ ಸಂಪರ್ಕ ದುಬಾರಿ: ಇನ್ನು ಗಣೇಶ ಹಬ್ಬ, ನಾಟಕ, ರಾಜಕೀಯ ಸಮಾವೇಶ ಹೀಗೆ ಖಾಸಗಿ ಸಭೆ ಸಮಾರಂಭಗಳಿಗೆ ತೆಗೆದುಕೊಳ್ಳುವ ತಾತ್ಕಾಲಿಕ ವಿದ್ಯುತ್ ಸಂಪರ್ಕ ಇನ್ನು ಮುಂದೆ ಬಲು ದುಬಾರಿ ಆಗಲಿದೆ. ಮೊದಲೆಲ್ಲಾ ಗರಿಷ್ಠ ಅಂದರೆ 5 ಸಾವಿರ ರೂ.ಗೆ ಎಲ್ಲವೂ ಮುಗಿದುಹೋಗುತ್ತಿತ್ತು. ಆದರೆ, ಇನ್ನು ಮುಂದೆ ಖಾಸಗಿಯಾಗಿ ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ಕನಿಷ್ಠ 7-8 ಸಾವಿರ ರೂ. ವೆಚ್ಚ ಆಗಲಿದೆ ಎಂದು ಊಹಿಸಲಾಗಿದೆ. ಬಳಕೆ ಮಾಡುವ ವಿದ್ಯುತ್ ಯುನಿಟ್ ಆಧಾರದಲ್ಲಿ ವಾಣಿಜ್ಯ ಬೆಲೆಯಲ್ಲಿ ಮೊದಲೇ ಹಣ ಪಾವತಿಸಬೇಕೆಂಬುದು ಬೆಸ್ಕಾಂ ಅಧಿಕಾರಿಗಳ ವಾದ ಆಗಿದೆ.

ಯುಪಿಐ ಮೂಲಕ ಭರಿಸಬಹುದು: ವಿದ್ಯುತ್ ಬೇಕಾದವರು ಯುಪಿಐ ಮೂಲಕ, ಇಲ್ಲ ಬೆಸ್ಕಾಂ ಆ್ಯಪ್ ಮೂಲಕ ರಿಚಾರ್ಜ್ ಮಾಡಬಹುದಾಗಿದೆ. ಫೆ.15 ರ ನಂತರ ಬರುತ್ತಿರುವ ಅರ್ಜಿಗಳಿಗೆ ನೂತನ ಸ್ಮಾರ್ಟ್ ಮೀಟರ್ ಕೊಡಲಾಗುತ್ತಿದೆ. ಮೊಬೈಲ್​ಗೆ ಪ್ರೀಪೇಯ್ಡ್, ಪೋಸ್ಟ್ ಪೇಯ್ಡ್​ ರೀತಿ ಮೊತ್ತ ಭರಿಸಿದಂತೆ ಈ ಮೀಟರ್​ಗಳಿಗೆ ಹಣ ಭರಿಸಿದ್ರೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಹಣ ಭರಿಸಿದ್ರೆ ಮಾತ್ರ ವಿದ್ಯುತ್ ದೊರೆಯಲಿದೆ. ಹಣ ಖಾಲಿಯಾದರೆ ವಿದ್ಯುತ್ ಕಡಿತ ಆಗಲಿದೆ” ಎಂದು ತಿಪ್ಪೇಸ್ವಾಮಿ ತಿಳಿಸಿದರು.

ಪ್ರತಿ ಹದಿನೈದು ನಿಮಿಷಗಳಿಗೊಮ್ಮೆ ಸಂದೇಶ: “ಪ್ರತಿ ಹದಿನೈದು ನಿಮಿಷಗಳಿಗೊಮ್ಮೆ ನಿಮ್ಮ ಖಾತೆಯಲ್ಲಿ ಎಷ್ಟು ಮೊತ್ತ ಇದೆ. ಎಷ್ಟು ಕಡಿತ ಆಗಿದೆ. ಎಷ್ಟು ಯುನಿಟ್ ವಿದ್ಯುತ್ ಖರ್ಚಾಗಿದೆ. ಬ್ಯಾಲೆನ್ಸ್ ಎಷ್ಟಿದೆ ಎಂದು ಸಂದೇಶ ಮೊಬೈಲ್​ಗೆ ಬರಲಿದೆ.‌ ರಾತ್ರಿ ಹಣ ಖಾಲಿ ಅದರೆ ವಿದ್ಯುತ್ ಕಡಿತ ಆಗಲ್ಲ, ಬೆಳಗ್ಗೆ ಹಣ ಭರಿಸಿದ್ರೆ ಮತ್ತೆ ವಿದ್ಯುತ್ ಚಾಲ್ತಿಯಾಗಲಿದೆ. ದಾವಣಗೆರೆಯ ಬೆಸ್ಕಾಂ ಕಚೇರಿಯಲ್ಲಿ ಈ ಡಿಜಿಟಲ್ ಮೀಟರ್ ದೊರೆಯಲಿದೆ. ಹಳೇ ಮೀಟರ್​ಗಳಿಗೆ ಇದು ಅನ್ವಯ ಆಗಲ್ಲ, ಹೊಸದಾಗಿ ಮೀಟರ್ ಬೇಕೆಂದು ಅರ್ಜಿ ಸಲ್ಲಿಸುವವರಿಗೆ ಈ ಮೀಟರ್ ದೊರೆಯಲಿದೆ. ಹಂತ ಹಂತವಾಗಿ ಹಳೇ ಮೀಟರ್​ಗಳಿಗೂ ಅನ್ವಯ ಮಾಡಲಾಗುವುದು, ಮೀಟರ್​ಗೆ ಮಿನಿಮಮ್ 100 ರೂಪಾಯಿ ಭರಿಸಬೇಕಾಗುತ್ತದೆ” ಎಂದರು.

ಜನಸಾಮಾನ್ಯರು ಹೇಳುವುದೇನು?: “ಸ್ಮಾರ್ಟ್ ಮೀಟರ್‌ಗಳು ಬಂದಿವೆ, ಹೊಸದಾಗಿ ಅರ್ಜಿ ಕೊಡುವವರಿಗೆ ಇದು ಅನ್ವಯ ಆಗಲಿದೆ. ಬೆಸ್ಕಾಂ ಅವರು ಮೊದಲು ಸರ್ಕಾರಿ ಕಚೇರಿ, ಕಟ್ಟಡಗಳಿಗೆ, ಕಮರ್ಷಿಯಲ್ ಕಟ್ಟಡಗಳಿಗೆ ವಿದ್ಯುತ್ ಮೀಟರ್ ಅಳವಡಿಸಬೇಕಿತ್ತು. ಮೂರು ಸಾವಿರ ಇದ್ದ ಮೀಟರ್ ಬೆಲೆ ಐದು ಸಾವಿರ ಆಗಿದೆ. ಐದು ಸಾವಿರ ಇದ್ದ ಮೀಟರ್ ಎಂಟು ಸಾವಿರ ಆಗಿದೆ. ಬೆಸ್ಕಾಂ ಅವರು ಬಡವರಿಗೆ ದರ ಕಡಿಮೆ ಮಾಡುವ ಯೋಚನೆ ಮಾಡಬೇಕು. ಇಷ್ಟು ದಿನ ತಿಂಗಳಿಗೊಮ್ಮೆ ಬಿಲ್ ಸಂದಾಯ ಮಾಡುತ್ತಿದ್ದರು. ಇದೀಗ ಎಷ್ಟು ಹಣ ಭರಿಸುತ್ತಾರೋ ಅಷ್ಟು ವಿದ್ಯುತ್ ಸಂದಾಯ ಆಗಲಿದೆ. ಹಣ ಖಾಲಿ ಅದರೆ ವಿದ್ಯುತ್ ಕಡಿತ ಆಗಲಿದೆ‌. ವಿದ್ಯುತ್ ರಾತ್ರಿ ಏಕಾಏಕಿ ಕಡಿತ ಆಗದೆ ಇರುವುದು ಖುಷಿ ಸಂಗತಿ” ಎಂದು ಸ್ಥಳೀಯ ಗಿರೀಶ್ ದೇವರಮನೆ ತಿಳಿಸಿದರು.

Previous Post

ಸೌಜನ್ಯ ಕೇಸ್ ವಿಡಿಯೋ ಮಾಡಿದ್ದ ಯುಟ್ಯೂಬರ್ Dhootha ಸಮೀರ್‌ ಬಂಧನಕ್ಕೆ ಯತ್ನ; ಪೊಲೀಸರಿಂದ ನೋಟಿಸ್

Next Post

ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ: ಸಿಗದ ಸುಳಿವು, ಪೊಲೀಸರಿಗೆ ಹೈಕೋರ್ಟ್ ಖಡಕ್ ಸೂಚನೆ

Next Post
ಪಿಯುಸಿ ವಿದ್ಯಾರ್ಥಿ   ದಿಗಂತ್ ನಾಪತ್ತೆ: ಸಿಗದ ಸುಳಿವು, ಪೊಲೀಸರಿಗೆ ಹೈಕೋರ್ಟ್ ಖಡಕ್ ಸೂಚನೆ

ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ: ಸಿಗದ ಸುಳಿವು, ಪೊಲೀಸರಿಗೆ ಹೈಕೋರ್ಟ್ ಖಡಕ್ ಸೂಚನೆ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.