
ಕೇಂದ್ರದ ಬಜೆಟ್ ನಿರಾಶದಾಯಕ ಬಜೆಟ್. ಇದು ಎಲೆಕ್ಷನ್ ಬಜೆಟ್ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ನಲ್ಲಿ ಯಾವುದೇ ಹೊಸ ಅಂಶ ಇಲ್ಲ. ವಿಶ್ಲೇಷಣೆ ಮಾಡುವುದು ಕಷ್ಟ. ಚುನಾವಣೆಗೋಸ್ಕರ ಬಜೆಟ್ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಬೆಂಗಳೂರು, ಫೆಬ್ರವರಿ 1: ಇದು ಬಹಳ ಹೊತ್ತು ಚರ್ಚೆ ಮಾಡುವ ಬಜೆಟ್ ಅಲ್ಲವೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟಾರೆ ಕೇಂದ್ರದ ಬಜೆಟ್ ನಿರಾಶದಾಯಕ ಬಜೆಟ್. ಇದು ಎಲೆಕ್ಷನ್ ಬಜೆಟ್ ಎಂದು ಕಿಡಿಕಾರಿದ್ದಾರೆ. 47 ಲಕ್ಷದ 65 ಸಾವಿರ 768 ಕೋಟಿ ರೂ. ಗಾತ್ರ ಬಜೆಟ್ ಆಗಿದೆ. ಕಳೆದ ವರ್ಷ 45 ಲಕ್ಷದ 3 ಸಾವಿರ 97 ಕೋಟಿ 2 ಲಕ್ಷದ 66 ಸಾವಿರ ಕೋಟಿ ರೂ. ಹೆಚ್ಚು ಈಗಿನ ಮಧ್ಯಂತರ ಬಜೆಟ್ ಘೋಷಣೆ ಆಗದಿರಬಹುದು. ಅಂದರೆ ಕಳೆದ ಬಾರಿಗಿಂತ ಈ ವರ್ಷ 5.8% ಹೆಚ್ಚಳವಾಗಿದೆ ಎಂದಿದ್ದಾರೆ.

ಬಜೆಟ್ ವಿಶ್ಲೇಷಣೆ ಮಾಡುವುದು ಕಷ್ಟ
16 ಲಕ್ಷದ 85 ಸಾವಿರದ 496 ಕೋಟಿ ರೂ. ಸಾಲ ಮಾಡಿದ್ದಾರೆ. 190 ಲಕ್ಷ ಕೋಟಿ ರೂ. ಸಾಲ ಕೇಂದ್ರದ ಮೇಲಿದೆ. ಈ ಬಜೆಟ್ನಲ್ಲಿ ಸಾಲಕ್ಕಾಗಿ ಬಡ್ಡಿ ಪಾವತಿ 11 ಲಕ್ಷದ 91 ಸಾವಿರ ಕೋಟಿ ರೂ. ಒಟ್ಟಾರೆಯಾಗಿ ಈ ಬಜೆಟ್ ನಿರಾಶಾದಾಯಕವಾಗಿದ್ದು, ಚುನಾವಣೆಗೋಸ್ಕರ ಮಾಡಿದ್ದಾರೆ. ಯಾವುದೇ ಹೊಸ ಅಂಶ ಇಲ್ಲ. ಬಜೆಟ್ ವಿಶ್ಲೇಷಣೆ ಮಾಡುವುದು ಕಷ್ಟ ಎಂದು ವಾಗ್ದಾಳಿ ಮಾಡಿದ್ದಾರೆ.

ಈ ಬಜೆಟ್ ಜನರ ಮುಂದೆ ಇಡುವುದಕ್ಕಿಂತ, ಮುಚ್ಚಿಟ್ಟಿರುವುದೇ ಜಾಸ್ತಿ. ನಿರುದ್ಯೋಗ, ಬೆಲೆ ಏರಿಕೆ, ರೈತರ ಸಮಸ್ಯೆ, ಬರಗಾಲದ ಬಗ್ಗೆ ಹೇಳಿಲ್ಲ. ಸಾಲ ಎಷ್ಟು ಮಾಡಿದ್ದೇವೆ, ವಿಕಸಿತ ಭಾರತ ಅಂತ ಎಲ್ಲ ಕಡೆ ಮೋದಿ ಸರ್ಕಾರದ ಸಾಧನೆ ಅಂತ ಪ್ರಚಾರ ಮಾಡುತ್ತಿದ್ದಾರೆ. ಇದು ವಿಕಸಿತ ಬಜೆಟ್ ಅಂತ ಹೇಳುತ್ತಿದ್ದಾರೆ. ವಿಕಸಿತ ಅಲ್ಲ, ಇದು ವಿನಾಶಕಾರಿ ಭಾರತ ಮಾಡುವ ಬಜೆಟ್ ಎಂದು ಕಿಡಿಕಾರಿದ್ದಾರೆ.
ಇದು ವಿನಾಶಕಾರಿ ಬಜೆಟ್
ಬಡವರು, ರೈತರು, ಯುವಕರು ಮತ್ತು ಮಹಿಳೆಯರಿಗಾಗಿ ಈ ಬಜೆಟ್ ಅಂತಾರೆ, ಇದು ವಿನಾಶಕಾರಿ ಬಜೆಟ್ ಅಂತ ನಾನು ಹೇಳುತ್ತೇನೆ. ನಾವು ನಿಜವಾಗಿಯೂ ಬಡವರು, ರೈತರು, ಯುವಕರು ಮತ್ತು ಮಹಿಳೆಯರಿಗಾಗಿ ಕಾರ್ಯಕ್ರಮ ಕೊಟ್ಟಿದ್ದೇವೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ಗೃಹಜ್ಯೋತಿ ಕೃಷಿಭಾಗ್ಯ ಭಾಗ್ಯಗಳನ್ನ ಕೊಟ್ಟಿದ್ದೇವೆ. ಕಳೆದ 45 ವರ್ಷಗಳಲ್ಲಿ ಬಹಳ ನಿರುದ್ಯೋಗ ಬೆಳೆದಿದೆ ಎಂದು ತಿಳಿಸಿದರು.
Mspಗೆ ಕನಿಷ್ಠ ಬೆಲೆಗೆ ಕಡಿಮೆ ಬೆಳೆಗಳನ್ನ ಮಾತ್ರ ಸೇರಿಸಿದ್ದಾರೆ. ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೂ MSP ಘೋಷಿಸಬೇಕು. ಇದು ಸೀತಾರಾಮನ್ ಅವರ ಆರನೇ ಬಜೆಟ್. ತೆರಿಗೆಯನ್ನ 30% ಇಳಿಸಿದ್ದೇವೆ ಅಂತ ಹೇಳುತ್ತಾರೆ. ಬಡವರಿಗೆ ಜಾಸ್ತಿ ತೆರಿಗೆ ವಿಧಿಸಿದ್ದಾರೆ. ಇದು ರೈತರ, ಬಡವರ ಹಾಗೂ ದಲಿತರ ವಿರೋಧಿ ಬಜೆಟ್ ಆಗಿದೆ.