
ಅಲೋಪತಿ ಔಷಧಿಗಳನ್ನು ಗರಿಯಾಗಿಸಿಕೊಂಡು ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಬಾಬಾ ರಾಮ್ ದೇವ್ ಒಡೆತನದ ಪಂತಜಲಿ ಆಯುರ್ವೇದ್ಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.
ಜನರ ದಾರಿ ತಪ್ಪಿಸುವ ನಿಮ್ಮ ಎಲ್ಲಾ ಜಾಹೀರಾತುಗಳನ್ನು ಈ ಕೂಡಲೇ ನಿಲ್ಲಿಸಬೇಕು. ಇದನ್ನು ಕೋರ್ಟ್ ತುಂಬಾ ಗಂಭೀರವಾಗಿ ಪರಿಗಣಿಸಲಿದೆ. ನಿಮ್ಮ ಪ್ರಾಡೆಕ್ಟ್ಗಳು ಕೆಲವು ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಸುಳ್ಳು ಹೇಳಿದ್ರೆ ಬರೋಬ್ಬರಿ ಒಂದು ಕೋಟಿ ದಂಡ ವಿಧಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ವಾರ್ನಿಂಗ್ ಮಾಡಿದೆ. ಜೊತೆಗೆ ಪತ್ರಿಕೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದೆ.

ಪಂತಜಲಿ ಸುಳ್ಳು ಜಾಹೀರಾತುಗಳನ್ನು ನೀಡಿ ಜನರ ದಾರಿ ತಪ್ಪಿಸುತ್ತಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ದೂರು ದಾಖಲಿಸಿತ್ತು. ಪಂತಂಜಲಿ ಸಾರ್ವಜನಿಕವಾಗಿ ನೀಡುತ್ತಿರುವ ಹೇಳಿಕೆಗಳನ್ನು ಎಲ್ಲಿಯೂ ಪರಿಶೀಲನೆ ಮಾಡಿಲ್ಲ. ಡ್ರಗ್ಸ್ ಅಂಡ್ ಅದರ್ ಮ್ಯಾಜಿಕ್ ರೆಮೆಡಿಸ್ ಆ್ಯಕ್ಟ್-1954 ಮತ್ತು ಕನ್ಸುಮರ್ ಪ್ರೊಟೆಕ್ಷನ್ ಆ್ಯಕ್ಟ್-2019ರ ಪ್ರಕಾರ ಇದು ಅಪರಾಧ ಎಂದು ಐಎಂಎ ವಾದಿಸಿದೆ.
