
ತರಗತಿಗಳನ್ನ ಮುಗಿಸಿ ಇನ್ನೇನು ಮಗು ಮನೆಯೊಳಗೆ ಬರಬೇಕಿತ್ತು, ಆದ್ರೆ ಚಾಲಕನ ಬೇಜವಾಬ್ದಾರಿಯಿಂದ ಮಗು ಮನೆಗೆ ಬರುವ ಬದಲು ಬಾರದ ಲೋಕಕ್ಕೆ ಜಾರಿದ ಹೃದಯ ವಿದ್ರಾವಕ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣಕ್ಕೆ ಸಮೀಪದ ಎಂ.ಮೇಡಹಳ್ಳಿಯಲ್ಲಿ ನಡೆದಿದೆ,
ಆನೇಕಲ್ (ಜು.7) : ತರಗತಿಗಳನ್ನ ಮುಗಿಸಿ ಇನ್ನೇನು ಮಗು ಮನೆಯೊಳಗೆ ಬರಬೇಕಿತ್ತು, ಆದ್ರೆ ಚಾಲಕನ ಬೇಜವಾಬ್ದಾರಿಯಿಂದ ಮಗು ಮನೆಗೆ ಬರುವ ಬದಲು ಬಾರದ ಲೋಕಕ್ಕೆ ಜಾರಿದ ಹೃದಯ ವಿದ್ರಾವಕ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣಕ್ಕೆ ಸಮೀಪದ ಎಂ.ಮೇಡಹಳ್ಳಿಯಲ್ಲಿ ನಡೆದಿದೆ,

ದಾವಣಗೆರೆ ಮೂಲದ ದಂಪತಿಗಳ ಮಗು ದಿವ್ಯಾಂಶೂ (8) ಎರಡನೇ ತರಗತಿಯಲ್ಲಿ ಬಿದರಗೆರೆಯಲ್ಲಿರುವ SSV ಆಂಗ್ಲಮಾಧ್ಯಮದಲ್ಲಿ ಓದುತ್ತಿದ್ದ ಮಗು. ತರಗತಿಗಳನ್ನ ಮುಗಿಸಿ ಮನೆಗೆ ಹಿಂದಿರುವಾಗ ಮನೆ ಸಮೀಪವೇ ಬಸ್ನಿಂದ ಇಳಿಯುವಾಗ ಬಸ್ ಚಲಿಸಿದ ಪರಿಣಾಮ ಚಕ್ರಕ್ಕೆ ಸಿಲುಕಿದ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ

ಮಗು ಚಕ್ರದಡಿ ಸಿಲುಕಿದಾಗ ಅಕ್ಕಪಕ್ಕದವರು ಕಿರುಚಿದರೂ ಚಾಲಕನ ಕಿವಿ ಮೇಲೆ ಬೀಳಲೇ ಇಲ್ಲ , ಬಸ್ ಚಲಿಸಿಕೊಂಡು ಸ್ವಲ್ಪ ದೂರು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ದಿವ್ಯಾಂಶೂ ಎರಡನೇ ತರಗತಿಯಲ್ಲಿ ಓದುತ್ತಿದ್ದ. ಓದಿನಲ್ಲೂ ಚುರುಕುತನದಿಂದ ಎಲ್ಲರ ಗಮನ ಸೆಳೆದಿದ್ದ. ಇಂಥ ಮುದ್ದಾದ ಮಗು ಚಾಲಕನ ನಿರ್ಲಕ್ಷ್ಯಕ್ಕೆ ಬಲಿಯಾಗಿದೆ.
