
UCC Update: ಏಕರೂಪ ನಾಗರಿಕ ಸಂಹಿತೆಯ ಕುರಿತು ಕೇಂದ್ರ ಕಾನೂನು ಆಯೋಗ ಹೊಸ ಸಮಾಲೋಚನೆ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಹಿಂದೆ 21ನೇ ಕಾನೂನು ಆಯೋಗವೂ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಅಧ್ಯಯನ ನಡೆಸಿತ್ತು
- ಈ ಹಿಂದೆ 21ನೇ ಕಾನೂನು ಆಯೋಗವೂ ಈ ವಿಷಯವನ್ನು ಅಧ್ಯಯನ ಮಾಡಿತ್ತು.
- ಆಗ ಈ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯ ಎಂದು ಆಯೋಗ ಹೇಳಿತ್ತು.
- ಈ ಹಂತದಿಂದ ಇದೀಗ 3 ವರ್ಷಗಳಿಗಿಂತ ಹೆಚ್ಚು ಸಮಯಾವಕಾಶ ಗತಿಸಿದೆ.
- ಹೀಗಾಗಿ ಹೊಸದಾಗಿ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ.

Uniform Civil Code Update: ಏಕರೂಪ ನಾಗರಿಕ ಸಂಹಿತೆ ಕುರಿತು ಕೇಂದ್ರ ಕಾನೂನು ಆಯೋಗ ಮತ್ತೆ ಸಮಾಲೋಚನೆ ಪ್ರಕ್ರಿಯೆಯನ್ನು ಆರಂಭಿಸಿದೆ. ಇದಕ್ಕಾಗಿ ಸಾರ್ವಜನಿಕ ಹಾಗೂ ಧಾರ್ಮಿಕ ಸಂಘಟನೆಗಳಿಂದ ಅಭಿಪ್ರಾಯವನ್ನು ಕೋರಲಾಗಿದೆ. ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಮಾನ್ಯತೆ ಪಡೆದ ಧಾರ್ಮಿಕ ಸಂಸ್ಥೆಗಳ ಅಭಿಪ್ರಾಯ ಪಡೆಯಲು 22ನೇ ಕಾನೂನು ಆಯೋಗ ಮತ್ತೊಮ್ಮೆ ನಿರ್ಧರಿಸಿದೆ ಎಂದು ಆಯೋಗ ಬುಧವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಆಸಕ್ತರು ಮತ್ತು ಇಚ್ಛೆಯುಳ್ಳವರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು ಎಂದು ಅದು ಹೇಳಿದೆ. ಅಭಿಪ್ರಾಯ ಮಂಡಿಸಲು ಆಯೋಗ 30 ದಿನಗಳ ಕಾಲಾವಕಾಶ ನೀಡಿದೆ. ಕರ್ನಾಟಕ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ 22ನೇ ಕಾನೂನು ಆಯೋಗವು ಆಸಕ್ತರು ತಮ್ಮ ವೆಬ್ಸೈಟ್ ಅಥವಾ ಇಮೇಲ್ ಮೂಲಕ 30 ದಿನಗಳ ಒಳಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸುವಂತೆ ಕೋರಿದೆ.

ಈ ಮೊದಲು ಕೂಡ ಅಧ್ಯಯನ ನಡೆಸಲಾಗಿತ್ತು
ಈ ಹಿಂದೆ 21ನೇ ಕಾನೂನು ಆಯೋಗವೂ ಈ ವಿಷಯವನ್ನು ಅಧ್ಯಯನ ಮಾಡಿತ್ತು. ಆಗ ಈ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯ ಎಂದು ಆಯೋಗ ಹೇಳಿತ್ತು. ಈ ಹಂತದಿಂದ ಇದೀಗ 3 ವರ್ಷಗಳಿಗಿಂತ ಹೆಚ್ಚು ಸಮಯಾವಕಾಶ ಗತಿಸಿದೆ. ಹೀಗಾಗಿ ಹೊಸದಾಗಿ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ.

ಏಕರೂಪ ನಾಗರಿಕ ಸಂಹಿತೆಯು ಮದುವೆ, ವಿಚ್ಛೇದನ, ದತ್ತು ಸ್ವೀಕಾರ, ಆನುವಂಶಿಕತೆ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಉತ್ತರಾಧಿಕಾರದಂತಹ ವೈಯಕ್ತಿಕ ವಿಷಯಗಳನ್ನು ನಿಯಂತ್ರಿಸುವ ಸಾಮಾನ್ಯ ಕಾನೂನುಗಳನ್ನು ರಚಿಸುವ ಉದ್ದೇಶ ಹೊಂದಿದೆ. ಪ್ರಸ್ತುತ, ವಿವಿಧ ಧರ್ಮಗಳ ಅನುಯಾಯಿಗಳಿಗೆ ವಿವಿಧ ಕಾನೂನುಗಳು ಈ ಅಂಶಗಳನ್ನು ನಿಯಂತ್ರಿಸುತ್ತವೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ.