ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ಹಿಂದೂ ಮಹಾಸಭಾ ಕಿಡಿಕಾರಿದೆ.
ನಳೀನ್ ಅವ್ರೆ ತಾಕತ್ತಿದ್ರೆ ಪಕ್ಷೇತರರಾಗಿ ಮೋದಿ, ಯೋಗಿ ಹೆಸರು ಎತ್ತದೆ ಚುನಾವಣೆ ಎದುರಿಸಿ. ಅರುಣ್ ಪುತ್ತಿಲ ಅವ್ರ 10% ಮತವನ್ನ ಪಡೆದು ತೋರಿಸಿ. ನಿಮ್ಗೆ ತಾಕತ್ ಇದ್ಯಾ ಅಂತ ನೋಡಿ ಬಿಡೋಣ ಎಂದು ಸುದ್ದಿಗೋಷ್ಟಿಯಲ್ಲಿ ಹಿಂದೂ ಮಹಾಸಭಾ ಚಾಲಕ್ ಧರ್ಮೇಂದ್ರ ಅಮೀನ್ ಸವಾಲ್ ಎಸೆದಿದ್ದಾರೆ.
ಈ ನಡುವೆ ಹರೀಶ್ ಪೂಂಜಾನಂತಹ ಓರ್ವ ಶಾಸಕ ಸತ್ಯಜಿತ್, ತಿಮರೋಡಿ ಬಗ್ಗೆ ಮಾತಾಡ್ತಾರೆ. ಅವ್ರ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ ಬಿಜೆಪಿ ಶಾಸಕರಿಗೆ..? ಅಧಿಕಾರ ಸಿಕ್ಕಿದ ಕೂಡ್ಲೇ ಬಾಯಿಗೆ ಬಂದಾಗೆ ಮಾತಾಡೋದು ತಪ್ಪು. ಹೇಗೆ ಪೀಠದಲ್ಲಿ ಕೂರಿಸಿದ್ದೇವೋ, ಹಾಗೆಯೇ ಇಳಿಸೋದು ಗೊತ್ತು. ಹೀಗಾಗಿ ಹಿಂದೂ ಮಹಾಸಭಾ ಎಚ್ಚರಿಕೆ ಕೊಡ್ತಿದೆ. ನೈತಿಕತೆ ಇದ್ರೆ ಬಿಜೆಪಿ ಶಾಸಕರು ಮೌನವಾಗಿರಿ. ಸಾಧ್ಯವಾದ್ರೆ ಹಿಂದೂ ಕಾರ್ಯಕರ್ತರಿಗೆ ಹಿಂದುತ್ವವಾದಿಗಳಿಗೆ ಸಹಾಯ ಮಾಡಿ.
ಅದು ಬಿಟ್ಟು ಹಿಂಬಾಗಿಲಿನಲ್ಲಿ ಅಧಿಕಾರ ಬಳಸಿ ದೌರ್ಜನ್ಯ ಎಸೆಗೋದು ಮಾಡಿದ್ರೆ ನಾವ್ ಸುಮ್ಮನಿರಲ್ಲ ಎಂದ ಅವರು, ಎಲ್ಲಾ ಹಿಂದೂ ಸಂಘಟನೆಗಳನ್ನ ಜೊತೆ ಸೇರಿಸಿಕೊಂಡು ಬಿಜೆಪಿ ವಿರುದ್ಧ ಹೋರಾಟದ ಹಾದಿ ಹಿಡಿಯುತ್ತೇವೆ.

2024 ಲೋಕಸಭಾ ಚುನಾವಣೆ ಇದೆ. ನಾವ್ ಮೋದಿ ನೋಡಿಕೊಂಡು ಸುಮ್ಮನಿದ್ದೇವೆ. ಅದು ಬಿಟ್ಟು ನಿಮ್ಮ ಮುಖ ನೋಡಿ ಸುಮ್ಮನಿರಲ್ಲ. ಇದಕ್ಕೆ ಉತ್ತರ ಕೊಡೋದಕ್ಕೂ ಬರುತ್ತೆ. ಯಾವಾನಾದ್ರೂ ಒಬ್ಬ ಶಾಸಕನ ಮಗನಾಗಲಿ ಮಂತ್ರಿಯ ಮಗನಾಗಲಿ ಹೋರಾಟದ ಹಾದಿಯಲ್ಲಿದ್ದಾರಾ..?. ಹೀಗಾಗಿ ಎಚ್ಚರಿಕೆ ಕೊಡ್ತಾ ಇದ್ದೇವೆ ಎಂದರು. ಇನ್ನು ಪುತ್ತೂರಿನ ಪೊಲೀಸ್ ದೌರ್ಜನ್ಯ ಪ್ರಕರಣದಲ್ಲಿ ಸರಿಯಾದ ನ್ಯಾಯ ಸಿಕ್ಕಿಲ್ವ . ಈ ಕೂಡಲೇ ಡಿವೈಎಸ್ಪಿ ಅವರನ್ನ ಅಮಾನತು ಮಾಡ್ಬೇಕು. ಲ್ಲದಿದ್ದಲ್ಲಿ ನಾವು ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಎಚ್ಚರಿಕೆ ನೀಡಿದರು.

